Delhi, ಮೇ 8 -- ದೆಹಲಿ:ಎರಡೂ ದಶಕದ ಹಿಂದೆ ಭಾರತೀಯ ಏರ್‌ಲೈನ್ಸ್‌ನ ಐಸಿ-814 ಅಪಹರಣದ ಮಾಸ್ಟರ್‌ಮೈಂಡ್ ಆಗಿದ್ದ ಭಾರತ ಸೇರಿದಂತೆ ಹಲವು ದೇಶಗಳಿಗೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರಗಾಮಿ ಜೈಶ್-ಎ-ಮೊಹಮ್ಮದ್‌ನ ಕಾರ್ಯಾಚರಣೆ ಮುಖ್ಯಸ್ಥ ಅಬ್ದುಲ್ ರೌಫ್ ಅಜರ್‌ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆಪರೇಷನ್ ಸಿಂದೂರ್‌ನಲ್ಲಿ ಭಾರತ ಸೇನಾಪಡೆಯಿಂದ ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಪಂಜಾಬ್ ಪ್ರಾಂತ್ಯದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ಬಹಾವಲ್ಪುರ್ ಮತ್ತು ಮುರಿಯ್ಕೆಗಳಲ್ಲಿ ದಾಳಿ ನಡೆಸಿ, ಜೈಶ್ ಮತ್ತು ಲಷ್ಕರ್‌ನ ಪ್ರಧಾನ ಕಚೇರಿಗಳನ್ನು ನಾಶಪಡಿಸಿವೆ. ದಾಳಿ ವೇಳೆ ಹತ್ಯೆಗೊಳಗಾದವರಲ್ಲಿ ಜೈಶ್-ಮೊಹಮ್ಮದ್‌ನ ಕಾರ್ಯಾಚರಣೆ ಮುಖ್ಯಸ್ಥ, ಐಸಿ-814 ಅಪಹರಣದ ಮಾಸ್ಟರ್‌ಮೈಂಡ್ ಮತ್ತು ಅಂತರರಾಷ್ಟ್ರೀಯ ಜಿಹಾದಿ ಜಾಲಗಳ ಕೇಂದ್ರ ವ್ಯಕ್ತಿ ಅಬ್ದುಲ್ ರೌಫ್ ಅಜರ್ ಕೂಡ ಸೇರಿದ್ದಾನೆ" ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಬ್ದುಲ್ ರೌಫ್ ಅಜರ್ ವಿಶ್ವಸಂಸ್ಥೆ ಘೋಷಿಸಿರುವ ಜಗತ್ತಿನ ಪ್ರ...