Bengaluru, ಏಪ್ರಿಲ್ 16 -- ಈ ಬಾರಿ ಶಿಕ್ಷಣ ಕುರಿತು ಬರೆಯಲು ವಿಷಯಗಳು ಸಾಕಷ್ಟು. ಪರೀಕ್ಷೆ, ಫಲಿತಾoಶ, ಬಾಲಕಿಯರ ಸಾಧನೆ, ಶಾಲೆಗೆ ಮಕ್ಕಳನ್ನು ಸೇರಿಸುವ ಪಾಲಕರ begudi-ಸoಭ್ರಮ, ಬೇಸಿಗೆ ಶಿಬಿರ ಹೀಗೆ ಮನದಲ್ಲಿ ಬೆಳೆಯುತ್ತಿದ್ದ ವಿಷಯಗಳ ಪಟ್ಟಿ ನಳoದ ವಿಶ್ವವಿದ್ಯಾನಿಲಯದ ಅವಶೇಷಗಳ ನಡುವೆ ನಿoತಾಗ ಮಾಯವಾಗಿತ್ತು. ನಳಂದ ಮನ ತುಂಬಿತ್ತು.

ಮಗಧರ ರಾಜಧಾನಿ ರಾಜಗೀರ. ಬಿಹಾರದ ರಾಜಧಾನಿ ಪಾಟ್ನಾದಿoದ ಸುಮಾರು 80 ಕಿ.ಮೀ ದೂರದ ರಾಜಗೀರದ ಸುತ್ತಮುತ್ತಲ ಪ್ರದೇಶ, ಮಹಾಭಾರತದ ಜರಾಸoಧ ಹಾಗೂ ಭೀಮನ ಕುಸ್ತಿ ಯುದ್ಧವ ನೆನಪಿಸುವ ಸ್ಥಳ. ಕೃಷ್ಣನ ರಥ ಚಲಿಸಿದ ಹಾದಿಯಲ್ಲಿದೆ. ಮಹಾವೀರ ಜನಿಸಿದ ಕು೦ಡಲಗ್ರಾಮ ಇಲ್ಲಿಗೆ ಸಮೀಪ. ಬುದ್ಧ, ಗುರುನಾನಕರು ಸoಚರಿಸಿದ ಪ್ರದೇಶ. ರಾಜಗೀರದ ಸುತ್ತಮುತ್ತ ಚಲಿಸುತ್ತಿದ್ದರೆ ಬಿoಬಿಸಾರ, ಅಜಾತಶತ್ರು ಕುರಿತು ಕೇಳುತ್ತಾ ಇತಿಹಾಸದಲ್ಲಿ ನಡೆದಾಡಿದ ಭಾವ ಆವರಿಸುತ್ತದೆ. ಆದರೆ ಮನದಲ್ಲಿ ಆಳವಾಗಿ ನಿಲ್ಲುವುದು ಶಿಕ್ಷಣದ ವ್ಯವಸ್ಥೆ ಕಲ್ಪಿಸುತ್ತಿದ್ದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಪಳಿಯುಳಿಕೆಗಳು. 11...