ಭಾರತ, ಮಾರ್ಚ್ 8 -- ಭಾರತ ದೇಶದ ಯುಗಾದಿ ವರ್ಷ ಭವಿಷ್ಯ: ಶ್ರೀ ವಿಶ್ವಾವಸು ನಾಮ ಸಂವತ್ಸರದಲ್ಲಿ ಭಾರತದಲ್ಲಿ ರಾಜಕೀಯ ಅಸ್ಥಿರತೆ ಇರುತ್ತದೆ. ಅಧಿಕಾರದ ದಾಹದಿಂದ ರಾಜಕೀಯ ಶತ್ರುತ್ವ ಹೆಚ್ಚುತ್ತದೆ. ದೇಶದಲ್ಲಿ ಉತ್ತಮ ಸಂಪತ್ತು ಇರುತ್ತದೆ. ಆದರೆ ಅದರ ಬಳಕೆ ಸರಿಯಾದ ಮಾರ್ಗದಲ್ಲಿ ನಡೆಯುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳು ನಡೆಯಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಆಂತರಿಕವಾಗಿ ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಸಾಧ್ಯತೆಗಳು ಇರಲಿವೆ. ಹಗಲಿನ ವೇಳೆಯಲ್ಲಿಯೇ ದರೋಡೆ ಮತ್ತು ಕಳ್ಳತನದ ಪ್ರಕರಣಗಳು ಹೆಚ್ಚುತ್ತವೆ.

ಸಾಂಕ್ರಾಮಿಕ ರೋಗಗಳು ಬಹುವಾಗಿ ಕಾಡಲಿವೆ. ಜಗತ್ತನ್ನು ಕಾಡುತ್ತಿರುವ ರೋಗ ಒಂದಕ್ಕೆ ಭಾರತೀಯರು ಔಷಧಿಯನ್ನು ಕಂಡುಹಿಡಿಯುತ್ತಾರೆ. ಮೌನವಾಗಿದ್ದು ಸತತ ಪ್ರಯತ್ನದಿಂದ ಭಾರತವು ಅನೇಕ ಸಾಧನೆಗೆ ಕಾರಣವಾಗುತ್ತದೆ. ಭಾರತದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದ ಶಕ್ತಿಶಾಲಿ ದೇಶವೊಂದು ಪರೋಕ್ಷವಾಗಿ ಭಾರತಕ್ಕೆ ಶರಣಾಗುತ್ತದೆ. ಭಾರತವು ತ...