ಭಾರತ, ಮೇ 25 -- ಪಾಕಿಸ್ತಾನ ಕೇಂದ್ರಿತ ಭಯೋತ್ಪಾದಕರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಅಮಾಯಕ ಭಾರತೀಯರನ್ನು ಹತ್ಯೆ ಮಾಡಿದ ಬಳಿಕ ಭಾರತ ಸರ್ಕಾರ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದಕ್ಕಾಗಿ ರಾಜತಾಂತ್ರಿಕ ನಡೆಯನ್ನೂ ಅನುಸರಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ಜತೆಗಿನ ಸಿಂಧೂ ನದಿ ಒಪ್ಪಂದವನ್ನೂ ಅಮಾನತು ಮಾಡಿದೆ. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಹರಿಯುವ ಪ್ರಮಾಣವನ್ನು ಇಳಿಕೆ ಮಾಡಿದೆ. ಈ ನಡುವೆ, ಸದಾ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುವ ಚೀನಾ ದೇಶವು ಸದ್ದಿಲ್ಲದೇ ಸಟ್ಲೆಜ್ ನದಿ ನೀರು ಭಾರತಕ್ಕೆ ಹರಿಯುವ ಪ್ರಮಾಣವನ್ನು ಇಳಿಕೆ ಮಾಡಿದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಈ ಶಂಕೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಉಪಗ್ರಹ ದತ್ತಾಂಶವನ್ನು ಹಂಚಿಕೊಂಡಿದ್ದಾರೆ.

ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಈ ವಿಚಾರವನ್ನು ...