Bengaluru, ಏಪ್ರಿಲ್ 25 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಭಾಗ್ಯ, ತಾಂಡವ್ ಕೆಲಸ ಮಾಡುವ ಆಫೀಸ್‌ಗೆ ಹೋಗಿ ಅಲ್ಲಿನ ಎಚ್‌ಆರ್ ಅಧಿಕಾರಿಯನ್ನು ಭೇಟಿ ಮಾಡಿದ್ದಾಳೆ. ಅವಳು ಆಫೀಸ್‌ಗೆ ಬಂದಿರುವುದನ್ನು ತಾಂಡವ್ ಮತ್ತು ಶ್ರೇಷ್ಠಾ ಗಮನಿಸಿದ್ದಾರೆ. ಅವರಿಬ್ಬರೂ ಹೊಸ ಅಪಾರ್ಟ್‌ಮೆಂಟ್ ಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಅದರ ಮಧ್ಯೆ ಆಫೀಸ್‌ಗೆ ಭಾಗ್ಯ ಬಂದಿರುವುದು ಅವರಿಗೆ ಕಸಿವಿಸಿಯಾಗಿದೆ. ಇವಳು ಯಾಕೆ ಇಲ್ಲಿ ಬಂದಳು ಎಂದು ತಲೆ ಕೆರೆದುಕೊಂಡಿದ್ದಾನೆ ತಾಂಡವ್. ನಂತರ ನೇರವಾಗಿ ಅವಳ ಬಳಿಯೇ ಹೋಗಿ ಕೇಳಿದ್ದಾನೆ. ಆಗ ಭಾಗ್ಯ ಏನೋ ಸ್ವಲ್ಪ ಕೆಲಸ ಇತ್ತು, ಅದಕ್ಕಾಗಿ ಬಂದೆ ಎನ್ನುತ್ತಾಳೆ. ನಂತರ ಅಲ್ಲಿಂದ ಹೊರಟು ಹೋಗಿದ್ದಾಳೆ.

ಅದಾದ ಬಳಿಕ, ಶ್ರೇಷ್ಠಾ ಎಚ್‌ಆರ್ ಬಳಿ ಹೋಗಿ ಭಾಗ್ಯ ಬಂದ ವಿಚಾರವನ್ನು ಪ್ರಸ್ತಾಪಿಸಿದ್ದಾಳೆ. ಆದರೆ ಅವನು ಮಾತ್ರ ಯಾವುದೇ ವಿಚಾರ ಇವಳ ಬಳಿ ಹೇಳಿಲ್ಲ. ಹೀಗಾಗಿ ಭಾಗ್ಯ ಯಾಕೆ ಆಫೀಸ್‌ಗೆ ಬಂದಿದ್ದಳು ಎನ್ನುವುದು ತಾಂಡವ್ ಮತ್ತು ಶ್ರ...