Bengaluru, ಏಪ್ರಿಲ್ 26 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಭಾಗ್ಯ ತಾಂಡವ್ ಕೆಲಸ ಮಾಡುವ ಕಂಪನಿಯ ಕ್ಯಾಂಟೀನ್ ವಹಿಸಿಕೊಂಡಿದ್ದಾಳೆ. ಕೈತುತ್ತು ಕ್ಯಾಂಟೀನ್ ಉದ್ಘಾಟನೆ ನೆರವೇರಿದೆ. ಭಾಗ್ಯ ಮನೆಯವರು ಎಲ್ಲರೂ ಅಲ್ಲಿ ಸೇರಿ ಸಂಭ್ರಮಿಸಿದ್ದಾರೆ. ಭಾಗ್ಯ ಕೂಡ ತನ್ನ ಕಷ್ಟಗಳು ದೂರಾಗಲಿ, ಹೊಸ ಉದ್ಯಮ ಕೈಹಿಡಿಯಲಿ ಎಂದು ಬೇಡಿಕೊಂಡಿದ್ದಾಳೆ. ಕಂಪನಿಯ ಬಾಸ್ ಮತ್ತು ಅವರ ಹೆಂಡತಿ ಮನಸಾರೆ ಭಾಗ್ಯಳನ್ನು ಹೊಗಳಿದ್ದಾರೆ. ಅಲ್ಲದೆ, ಉದ್ಯೋಗಿಗಳು ಕೂಡ ಭಾಗ್ಯ ಕ್ಯಾಂಟೀನ್ ತೆರೆದಿರುವುದನ್ನು ಕಂಡು ಸಂಭ್ರಮಿಸಿದ್ದಾರೆ.
ನಂತರ ಭಾಗ್ಯ, ನನಗೆ ಈ ಅವಕಾಶ ನೀಡಿರುವುದಕ್ಕೆ ಕಂಪನಿ ಬಾಸ್ ಮತ್ತು ಅವರ ಹೆಂಡತಿಗೆ ಕೃತಜ್ಞತೆ ಹೇಳಿದ್ದಾಳೆ, ಬಳಿಕ ಬಾಸ್ ಹೆಂಡತಿ ಮಾತನಾಡಿ, ಭಾಗ್ಯಗೆ ಕೆಲವರು ತುಂಬಾ ಬೇಕಾದವರೇ ಕಿರುಕುಳ ಕೊಟ್ಟಿದ್ದಾರೆ. ಕಷ್ಟ ಕೊಟ್ಟಿದ್ದಾರೆ. ಆದರೂ ಅವಳು ಎಲ್ಲವನ್ನೂ ಎದುರಿಸಿ, ಮುನ್ನುಗ್ಗಿದ್ದಾಳೆ. ಅಲ್ಲದೆ, ಅವಳ ಸ್ವಂತ ಗಂಡನೇ ಅನ್ಯಾಯ ಮಾಡಿದರೂ, ಅವಳು ಮಾತ್ರ ...
Click here to read full article from source
To read the full article or to get the complete feed from this publication, please
Contact Us.