ಭಾರತ, ಮೇ 19 -- ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್‌ ಜೊತೆಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಿಸಬೇಕೆಂದು ಕುಸುಮಾ ಮತ್ತು ಭಾಗ್ಯ ಹೊರಟಿದ್ದಾರೆ.

ಜಿಮ್‌ಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಕುಸುಮಾ ತಾನು ಜಿಮ್‌ಗೆ ಸೇರಿದ ಹಿಂದಿನ ಉದ್ದೇಶ ಏನೆಂಬುದನ್ನು ಹೇಳಿದ್ದಾಳೆ. ಇದರಲ್ಲಿ ಏನೂ ತಪ್ಪಿಲ್ಲ ಎಂದಿದ್ದಾನೆ ಕಿಶನ್.

ಇತ್ತ ಇನ್ನೊಂದು ಕಡೆ ಕಿಶನ್‌ಗೆ ಫೋನ್‌ ಮಾಡಿದ ಸುನಂದಾ, ತಾನು ಏನೆನೆಲ್ಲ ನೋಡಿದೆ ಎಂಬುದನ್ನು ಫೋನ್‌ ಮಾಡಿ ಹೇಳಿದ್ದಾಳೆ. ನಿನ್ನಂಥವನಿಗೆ ನನ್ನ ಮಗಳನ್ನು ಕೊಡಲ್ಲ ಎಂದಿದ್ದಾಳೆ. ಭಾಗ್ಯಾಳ ಮುಂದೆಯೂ ಸುನಂದಾ ತಮ್ಮ ಅಸಮಾಧಾನ ಹೊರಹಾಕಿದ್ದಾಳೆ. ಇದೆಲ್ಲದರ ಹಿಂದೆ ಏನೋ ಇದೆ ಅನ್ನೋ ಅನುಮಾನ ಮೂಡಿದೆ.

ಹೀಗಿರುವಾಗಲೇ, ಗೊಂದಲ ನಿವಾರಣೆಗೆ ಕಿಶನ್‌ ನೇರವಾಗಿ ಪೂಜಾ ಮನೆಗೆ ಬಂದಿದ್ದಾನೆ. ಆದರೆ, ಕಿಶನ್‌ನ ನೋಡ್ತಿದ್ದಂತೆ ಸುನಂದಾ ಗರಂ ಆಗಿದ್ದಾಳೆ. ಮನೆಗೆ ಬಂದವನನ್ನು ಆಚೆ ಕಳಿಸುತ್ತಿದ್ದಾಳೆ. ಕೆಲವೊಂದು ವಿಚಾರಗಳನ್ನು ಕ್ಲಿಯರ್‌ ಮಾಡಬೇಕಿತ್ತು ಅದಕ್ಕಾಗಿ ಬಂದಿದ್ದೇನೆ ಎಂದು ಹೇಳಿದರೂ, ಸುನಂದಾ ಮಾತ್ರ ...