Bengaluru, ಮೇ 27 -- ಕಿಶನ್‌ ಮನೆಯಲ್ಲಿ ಭಾಗ್ಯಾ ಮತ್ತವರ ಕುಟುಂಬಕ್ಕೆ ಕನ್ನಿಕಾ ಅವಮಾನ ಮಾಡಿದ್ದಾಳೆ. ಕನ್ನಿಕಾಳ ವರ್ತನೆ ಭಾಗ್ಯಾ ಮಾತ್ರವಲ್ಲದೆ, ಅಪ್ಪ ರಾಮದಾಸ್‌ ಕಾಮತ್‌ಗೂ ಬೇಸರ ತರಿಸಿದೆ. ಹಾಗಾಗಿ ತಮ್ಮ ಕುಟುಂಬದಿಂದ ಆದ ತಪ್ಪಿಗೆ ಕಿಶನ್‌ ಜೊತೆಗೆ ಭಾಗ್ಯಾ ಮನೆಗೆ ಬಂದಿದ್ದಾನೆ ರಾಮ್‌ದಾಸ್‌ ಕಾಮತ್‌. ಇನ್ನೊಂದು ಕಡೆ ಇದೇ ಮದುವೆ ನಿಲ್ಲಿಸಲು ಆದೀಶ್ವರ್‌ ಎಂಟ್ರಿಯಾಗಿದ್ದಾನೆ.

ನಮ್ಮ ಮನೆಯಲ್ಲಿ ನಿಮಗೆ ಅವಮಾನವಾಗಿದೆ. ಅದಕ್ಕೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಈಗ ನಾನು ಬಂದಿರೋ ಮುಖ್ಯ ಕೆಲಸ ಏನೆಂದರೆ, ಕಿಶನ್‌ ಮತ್ತು ಪೂಜಾ ಮದುವೆ ಬಗ್ಗೆ ಮಾತನಾಡೋಕೆ ಎಂದಿದ್ದಾನೆ ರಾಮ್‌ದಾಸ್‌ ಕಾಮತ್.‌

ಕಿಶನ್‌ ಮತ್ತು ಪೂಜಾ ಇಬ್ಬರನ್ನೂ ಅಕ್ಕ ಪಕ್ಕ ಕೂರಿಸಿ, ಒಂದಷ್ಟು ಪ್ರಶ್ನೆ ಕೇಳಿದ್ದಾರೆ ರಾಮ್‌ದಾಸ್‌. ನಿಜವಾಗಿ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೇವೆ ಎಂದಿದ್ದಾನೆ ಕಿಶನ್‌. ಕಿಶನ್‌ ಅಂದ್ರೆ ನನಗೂ ಇಷ್ಟಾನೇ ಎಂದಿದ್ದಾಳೆ ಪೂಜಾ.

ಇವರಿಬ್ಬರ ಮದುವೆ ಆಗೇ ಆಗುತ್ತೆ. ಇವತ್ತು...