ಭಾರತ, ಮೇ 16 -- ಪೂಜಾಳ ಮದುವೆಯಾಗಬೇಕಿರುವ ಹುಡುಗ ಹೇಗಿರಬೇಕು ಎಂದುಕೊಂಡಿದ್ದಾರೋ, ಅಂತ ಹುಡುಗನೇ ಸಿಕ್ಕಿದ್ದಾನೆ. ಜಿಮ್ ಮಾಲೀಕ ಕಿಶನ್ ನೋಡಿದ ಕುಸುಮಾ, ಜಿಮ್ ಸೇರಿಕೊಳ್ಳುವ ನೆಪದಲ್ಲಿ ಕಿಶನ್ ಹೇಗೆ? ಆತನ ವರ್ತನೆ ಹೇಗಿರುತ್ತೆ? ಕೋಪ ಮಾಡಿಕೊಂಡಾಗ ಹೇಗಿರ್ತಾನೆ, ಲವ್ ಬಗೆಗಿನ ಆತನ ಮಾತು.. ಹೀಗೆ ಎಲ್ಲವನ್ನೂ ಕಂಡು ಫಿದಾ ಆಗಿದ್ದಾಳೆ ಕುಸುಮಾ. ಇನ್ನೇನು ಜಿಮ್ನಲ್ಲಿ ಹೆವಿ ವೇಟ್ ಎತ್ತುವ ಭರದಲ್ಲಿ, ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಾಗ, ಕಿಶನ್ ತೋರಿದ ಕಾಳಜಿಗೂ ಕುಸುಮಾ ಖುಷಿಯಾಗಿದ್ದಾಳೆ. ಇದೆಲ್ಲವನ್ನು ಮನೆಗೆ ಬಂದು ಭಾಗ್ಯ ಬಳಿಯೂ ಹೇಳಿಕೊಂಡಿದ್ದಾಳೆ.
ಆದರೆ ಭಾಗ್ಯಾಗೆ ತಾಂಡವ್ನದ್ದೇ ಚಿಂತೆ. ಕಿಶನ್ ಒಳ್ಳೆಯವನೇ ಇರಬಹುದು, ಆದರೆ ಆತನ ಬುದ್ದಿ ಹೇಗಿದೆಯೋ ಏನೋ. ಯಾಕಂದ್ರೆ ತಾಂಡವ್ ವಿಚಾರದಲ್ಲಿ ಈಗಾಗಲೇ ಅನುಭವಿಸಿದ್ದು ಸಾಕಾಗಿದೆ ಎಂದಿದ್ದಾಳೆ ಭಾಗ್ಯ. ಆಕೆಯ ಮಾತಿಗೆ ನೀನು ತಾಂಡವ್ಗೂ ಆ ಹುಡುಗನಿಗೂ ಹೋಲಿಕೆ ಮಾಡಬೇಡ. ಇಬ್ಬರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಮನಸ್ಸು ಅಪ್ಪಟ ಬಂಗಾರ, ಸಂಸ್ಕಾರವಂ...
Click here to read full article from source
To read the full article or to get the complete feed from this publication, please
Contact Us.