ಭಾರತ, ಮೇ 17 -- ಕಿಶನ್‌ ಜೊತೆ ಪೂಜಾಳ ಮದುವೆ ಮಾಡಿಸಬೇಕೆಂದು, ಕಿಶನ್‌ ಹೇಗೆ ಎಂಬುದನ್ನು ತಿಳಿದುಕೊಂಡಿದ್ದಾಳೆ ಕುಸುಮಾ. ಆದರೆ, ಇದೇ ಕಿಶನ್‌ನನ್ನು ಕೆಟ್ಟದಾಗಿ ಬಿಂಬಿಸುವ ನಿಟ್ಟಿನಲ್ಲಿ ತಾಂಡವ್‌ ಹೊಸ ತಂತ್ರ ಮಾಡಿದ್ದಾನೆ. ಸುನಂದಾ ಕಣ್ಣಿಗೆ ಆತನನ್ನು ಕೆಟ್ಟವನಂತೆ ತೋರಿಸಿ ಖುಷಿಪಟ್ಟಿದ್ದಾನೆ. ಅಷ್ಟಕ್ಕೂ ಭಾಗ್ಯಲಕ್ಷ್ಮೀ ಧಾರಾವಾಹಿಯ ಮೇ 16ರ 790ನೇ ಸಂಚಿಕೆಯಲ್ಲಿ ಏನಾಯ್ತು? ಇಲ್ಲಿದೆ ನೋಡಿ ವಿವರ.

ಭಾಗ್ಯಾಳ ನೆಮ್ಮದಿ ಹಾಳು ಮಾಡಲು ಹೋಗಿ ತನ್ನ ನೆಮ್ಮದಿಯನ್ನೇ ಕಳೆದುಕೊಂಡು ಕಿರುಚಾಡುತ್ತಿದ್ದಾನೆ ತಾಂಡವ್.‌ ಹೇಗಾದ್ರು ಮಾಡಿ, ಅವಳಿಗೆ ಪಾಠ ಕಲಿಸಬೇಕು ಎಂದಿದ್ದಾನೆ. ಅಷ್ಟೊತ್ತಿಗೆ ಶ್ರೇಷ್ಠಾ ನನ್ನ ಕಡೆ ಒಂದು ಐಡಿಯಾ ಇದೆ ಎಂದಿದ್ದಾಳೆ.

ಹೇಗಾದ್ರೂ ಮಾಡಿ ಪೂಜಾ ಮದುವೆ ನಿಲ್ಲಿಸಿದ್ರೆ ಹೇಗೆ ಎಂದಿದ್ದಾಳೆ. ನಾವು ಅತ್ತೆ ಸುನಂದಾನಾ ಟಾರ್ಗೆಟ್‌ ಮಾಡಿದ್ರೆ, ಈ ಪ್ಲಾನ್‌ ಸಕ್ಸಸ್‌ ಆಗುತ್ತೆ. ಈ ಮದುವೆನಾ ಸಲೀಸಾಗಿ ನಿಲ್ಲಿಸಬಹುದು ಎಂದಿದ್ದಾಳೆ. ತನ್ನ ಪ್ಲಾನ್‌ ಏನು ಎಂಬುದನ್ನು ಶ್ರೇಷ್ಠಾ ಹೇಳಿಕೊಂಡಿದ್ದಾಳೆ.

ಇತ್ತ ತ...