Bengaluru, ಮೇ 26 -- ಕಲರ್ಸ್‌ ಕನ್ನಡದ ನಂಬರ್‌ 1 ಧಾರಾವಾಹಿ ಭಾಗ್ಯಲಕ್ಷ್ಮೀಯ ಮೇ 25ರ 798ನೇ ಸಂಚಿಕೆಯಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ.

ಕಿಶನ್‌ ಮತ್ತು ಪೂಜಾ ಮದುವೆ ಮಾಡಿಸಬೇಕು ಅನ್ನೋ ಕಾರಣಕ್ಕೆ, ನೇರವಾಗಿ ಕಿಶನ್‌ನ ಮನೆಗೆ ಬಂದಿದ್ದಾರೆ ಭಾಗ್ಯಾ ಕುಟುಂಬ. ಆದರೆ, ಅಲ್ಲಿ ಅಚ್ಚರಿ ಸಂಗತಿ ಬಹಿರಂಗವಾಗಿದೆ. ದೇವಸ್ಥಾನದಲ್ಲಿ ಎಲ್ಲರ ಮುಂದೆ ಅವಮಾನ ಮಾಡಿದ ಕನ್ನಿಕಾ ಬೇರೆ ಯಾರೂ ಅಲ್ಲ, ಆಕೆ ಕಿಶನ್‌ನ ತಂಗಿ ಅನ್ನೋದು ಗೊತ್ತಾಗಿದೆ.

ಬಿಟ್ಟಿ ಊಟ ಮಾಡೋಕೆ ಬಂದ್ರಾ ಅಥವಾ ಭಿಕ್ಷೆ ಬೇಡೋಕೆ ಬಂದ್ರಾ? ಎಂದು ಕಿಶನ್‌ ಮನೆಗೆ ಬಂದ ಭಾಗ್ಯಾ ಕುಟುಂಬಕ್ಕೆ ಕನ್ನಿಕಾಳಿಂದ ಅವಮಾನವಾಗಿದೆ. ಭಾಗ್ಯಾ, ಕುಸುಮಾ, ಪೂಜಾ, ಸುನಂದಾ ಕೈಯಲ್ಲಿದ್ದ ಹೂವು, ಹಣ್ಣು, ಸೀರೆಯನ್ನು ಎಸೆದು ಎಲ್ಲರನ್ನೂ ಮನೆಯಿಂದ ಆಚೆ ಕಳಿಸುವಂತೆ ಸೆಕ್ಯೂರಿಟಿಗೆ ಆದೇಶಿಸಿದ್ದಾಳೆ ಕನ್ನಿಕಾ.

ಕಿಶನ್‌ ತಂಗಿ ಕನ್ನಿಕಾ ಎಂಬ ವಿಚಾರ ಕುಸುಮಾ ಮತ್ತು ಭಾಗ್ಯಾಗೆ ಗೊತ್ತಾಗಿದೆ. ಕನ್ನಿಕಾಳ ಮಾತಿಗೆ ಬೇಸತ್ತು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ತೊರೆದಿದ್ದಾರೆ. ಅ...