Bengaluru, ಮೇ 20 -- ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್‌ ಹೆಸರು ಹಾಳು ಮಾಡುವ ತಾಂಡವ್‌ ಮತ್ತು ಶ್ರೇಷ್ಠಾ ತಂತ್ರ ವಿಫಲವಾಗಿದೆ. ಶ್ರೇಷ್ಠಾ ಛೂ ಬಿಟ್ಟಿದ್ದ ಹುಡುಗಿ ಭಾಗ್ಯ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಅಷ್ಟೇ ಅಲ್ಲ, ಇದರ ಹಿಂದೆ ಶ್ರೇಷ್ಠಾ ಇದ್ದಾಳೆ ಅನ್ನೋ ಸತ್ಯವನ್ನೂ ಬಾಯ್ಬಿಟ್ಟಿದ್ದಾಳೆ.

ಕಿಶನ್‌ ಬೈಕ್‌ ಮೇಲೆ ಕೂತ ಹುಡುಗಿಯ ಹಿಂದೆ ಬಿದ್ದಾಳೆ ಭಾಗ್ಯಾ ಮತ್ತು ಕುಸುಮಾ. ಕಿಶನ್‌ ಕಡೆಯಿಂದ ನಂಬರ್‌ ಪಡೆದು, ಆ ಹುಡುಗಿಯನ್ನು ಒಂದು ಲೊಕೇಷನ್‌ಗೆ ಬರುವುದಕ್ಕೂ ಹೇಳಿದ್ದಾಳೆ ಭಾಗ್ಯ.

ಇಂಥ ಕೆಲಸಕ್ಕೆ ಇನ್ನೊಬ್ಬರು ಮುಖ್ಯವಾದ ವ್ಯಕ್ತಿ ಬರಬೇಕು. ಅವರು ಬಂದರೇ ಮಾತ್ರ ಇದಕ್ಕೆ ಕಳೆ ಕಟ್ಟೋದು ಎಂದಿದ್ದಾಳೆ ಕುಸುಮಾ. ಭಾಗ್ಯಾ ಕಾರಿನಲ್ಲಿ ಕೂರುತ್ತಿದ್ದಂತೆ, ಪೂಜಾಳ ತಾಯಿ ಸುನಂದಾಳನ್ನು ಕರೆದೊಯ್ಯುತ್ತಿದ್ದಾರೆ.

ಇತ್ತ ರೆಸ್ಟೋರಂಟ್‌ವೊಂದರಲ್ಲಿ ಈ ಮೂವರು ಬಂದು ಆ ಹುಡುಗಿಗಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ ಕಿಶನ್‌ ಬೆನ್ನೇರಿದ ಮಿಸ್ಟರಿ ಗರ್ಲ್‌ ಹೊಟೇಲ್‌ಗೆ ಬಂದು ಭಾಗ್ಯಾಗೆ ಫೋನ್‌ ಮಾಡಿದ್ದಾಳೆ.

ಆ ಹುಡುಗಿ ಬ...