Bengaluru, ಮೇ 19 -- ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 18ರ 792ನೇ ಸಂಚಿಕೆ: ಕಿಶನ್‌ ಎಂಥವನು ಅನ್ನೋದನ್ನು ಪೂಜಾ ತಾಯಿ ಸುನಂದಾ ಕಣ್ಣಾರೆ ಕಂಡು ಕೊಂಚ ಕುಪಿತಳಾಗಿದ್ದಾಳೆ. ನೀಚ ತಾಂಡವ್‌ ತನ್ನ ಕೆಟ್ಟ ಬುದ್ದಿ ಉಪಯೋಗಿಸಿ, ಸುನಂದಾ ಮುಂದೆ ಸುಳ್ಳಿನ ನಾಟಕವಾಡಿದ್ದಾನೆ. ಕಿಶನ್‌ ಜತೆಗೆ ಸಲುಗೆಯಿಂದ ವರ್ತಿಸುವಂತೆ ಹುಡುಗಿಯೊಬ್ಬಳನ್ನು ಬಿಟ್ಟು, ಆತನ ಜೊತೆಗೆ ಸಲುಗೆಯಿಂದ ನಡೆದುಕೊಂಡಿದ್ದು, ಸುನಂದಾ ಕಣ್ಣಿಗೆ ಬಿದ್ದಿದೆ. ಇದೆಲ್ಲವೂ ಅಳಿಯ ತಾಂಡವ್‌ ಕುತಂತ್ರ ಎಂಬುದು ಸುನಂದಾಗೆ ತಿಳಿದಿಲ್ಲ. ಆದರೆ, ಆತನ ಮಾತನ್ನೇ ಆಕೆ ನಂಬಿದ್ದಾಳೆ. ನೇರವಾಗಿ ಮನೆಗೆ ಬಂದು, ನಾನು ಯಾವುದೇ ಕಾರಣಕ್ಕೂ ಪೂಜಾ ಜೊತೆ ಕಿಶನ್‌ ಮದುವೆ ಮಾಡಿಸಲ್ಲ ಎಂದಿದ್ದಾಳೆ.

ಇತ್ತ ಕಿಶನ್‌ ಜೊತೆಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಿಸಬೇಕೆಂದು ಕುಸುಮಾ ಮತ್ತು ಭಾಗ್ಯಲಕ್ಷ್ಮೀ ಹೊರಟಿದ್ದಾರೆ. ಜಿಮ್‌ಗೆ ಹೋಗಿ ಆತನನ್ನು ಭೇಟಿಯಾಗಿ ಬಂದಿದ್ದಾರೆ. ಕುಸುಮಾ ತಾನು ಜಿಮ್‌ಗೆ ಸೇರಿದ ಹಿಂದಿನ ಉದ್ದೇಶ ಏನೆಂಬುದನ್ನೂ ಹೇಳಿದ್ದಾಳೆ. ಇದರಲ್ಲಿ ಏನೂ ತಪ್ಪಿಲ್ಲ ಎಂದಿದ್ದಾನೆ...