Bengaluru, ಏಪ್ರಿಲ್ 8 -- ಜೀ ಕನ್ನಡ ವಾಹಿನಿ ಇದೀಗ ಹೊಸ ಸೀರಿಯಲ್‌ ಮೂಲಕ ವೀಕ್ಷಕರೆದುರು ಆಗಮಿಸುವ ಸನಿಹದಲ್ಲಿದೆ. ಕರ್ಣ ಅನ್ನೋ ಸೀರಿಯಲ್‌ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿದೆ.

ಪ್ರೋಮೋ ಮೂಲಕವೇ ಗಮನ ಸೆಳೆದ ಕರ್ಣ ಸೀರಿಯಲ್‌, ರಿಚ್‌ ಮೇಕಿಂಗ್‌, ಸ್ಟಾರ್‌ ತಾರಾಗಣ, ಹೊಸ ರೀತಿಯ ಕಥೆಯ ಜತೆ ಈಗಾಗಲೇ ಕುತೂಹಲ ಮೂಡಿಸಿದೆ.

ಈ ಹಿಂದೆ ಕಲರ್ಸ್‌ ಕನ್ನಡದಲ್ಲಿ ಕನ್ನಡತಿ ಸೀರಿಯಲ್‌ನಲ್ಲಿ ನಟಿಸಿದ್ದ ಕಿರಣ್‌ ರಾಜ್‌, ಇದೀಗ ಕರ್ಣ ಮೂಲಕ ಜೀ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ.

ಮನೆಗೆ ಬೇಡವಾದ, ಊರಿನವರಿಗೆ ಬೇಕಾದ ಯುವಕನಾಗಿ ಕಿರಣ್‌ ರಾಜ್‌ ಕರ್ಣನ ಪೋಷಾಕು ಧರಿಸಿದ್ದಾರೆ. ಈ ಸೀರಿಯಲ್‌ನಲ್ಲಿ ಅವರಿಗೆ ಖ್ಯಾತ ವೈದ್ಯನ ಪಾತ್ರವಿದೆ.

ಹೀರೋ ಅಂದ ಮೇಲೆ ನಾಯಕಿಯೂ ಇರಲೇಬೇಕಲ್ಲವೇ, ಈ ಸೀರಿಯಲ್‌ಗೆ ʻಗೀತಾʼ ಸೀರಿಯಲ್‌ ನಟಿ, ಬಿಗ್‌ ಬಾಸ್‌ ಖ್ಯಾತಿಯ ಭವ್ಯಾ ಗೌಡ ನಾಯಕಿಯಾಗಿದ್ದಾರೆ.

ಅಧಿಕೃತ ವಾಹಿನಿಯಿಂದ ಪ್ರೋಮೋ ಬಿಡುಗಡೆ ಆಗದಿದ್ದರೂ, ಇವರಿಬ್ಬರ ಪ್ರೋಮೋ ಶೂಟ್‌ನ ಕ್ಲಿಪ್‌ ವೈರಲ್‌ ಆಗಿದ್ದವು.

ಇದೀಗ ಇದೇ ಸೀರಿಯಲ್‌ನಲ...