ಭಾರತ, ಮೇ 14 -- ಜೀ ಕನ್ನಡದ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಇದೀಗ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ.

ಅದರಂತೆ ಈ ವಾರ ಏನೆಲ್ಲ ಮನರಂಜನೆ ಇರಲಿದೆ ಎಂದು ಹೊರಳುತ್ತಿದ್ದಂತೆ, ಹೊಸ ಪ್ರೋಮೋ ಮೂಲಕ ಅಷ್ಟೇ ವಿಶೇಷ ಸಂಚಿಕೆಯ ಮೂಲಕ ಆಗಮಿಸಿದೆ ಭರ್ಜರಿ ಬ್ಯಾಚುಲರ್ಸ್‌.

ಈ ಹಿಂದೆ ಹೆಲಿಕಾಪ್ಟರ್‌ನಲ್ಲಿ ಗಗನಾ ಭಾರಿ ಅವರನ್ನು ಕರೆದೊಯ್ದು ಚಿತ್ರದುರ್ಗ ಮತ್ತು ಕೋಟೆಯನ್ನು ಸುತ್ತಿಸಿ ಬಂದಿದ್ದ ಪ್ರತಾಪ್‌, ಇದೀಗ ಇನ್ನೊಂದು ಅಚ್ಚರಿಯ ಜತೆಗೆ ಆಗಮಿಸಿದ್ದಾರೆ.

ಡೆಡಿಕೇಷನ್‌ ರೌಂಡ್‌ ಹೆಸರಿನಲ್ಲಿ ಬ್ಯಾಚುಲರ್ಸ್‌ ಮತ್ತು ಏಂಜಲ್ಸ್ ನಡುವೆ ಹರಕೆ ತ್ಯಾಗಗಳ ವಿನಿಮಯವಾಗಿದೆ. ಅದರಲ್ಲೂ ಡ್ರೋನ್‌ ಪ್ರತಾಪ್‌ ಅವರ ಹರಕೆ ಸದ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಜೀ ಕನ್ನಡದ ಮಹರ್ಷಿ ವಾಣಿ ಕಾರ್ಯಕ್ರಮ ನಡೆಸಿಕೊಡುವ ಆನಂದ್‌ ಗುರೂಜಿ ಅವರ ಲಕ್ಷ್ಮೀ ಭೂ ವರಾಹ ಸ್ವಾಮಿ ದೇವಸ್ಥಾನದಲ್ಲಿ, ತಮ್ಮ ಜೊತೆಗಾತಿ ಗಗನಾ ಭಾರಿ ಅವರ ಪರವಾಗಿ ವಿಶೇಷ ಹರಕೆ ಸಲ್ಲಿಸಿದ್ದಾರೆ.

ಬಾವಿಯ ತಣ್ಣೀರು ಸ್ನಾನ ಮಾಡಿದ, ಬಿಳಿ...