ಭಾರತ, ಮೇ 12 -- ಭಯೋತ್ಪಾದನೆ ವಿರುದ್ಧದ ಭಾರತ ಸಮರ - ಆಪರೇಷನ್ ಸಿಂದೂರ್ ಕಾರ್ಯಾಚರಣೆ ಶುರುವಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 12) ರಾತ್ರಿ 8 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಾಚರಣೆಯ ಉದ್ದೇಶವನ್ನು ಸ್ಪಷ್ಟಗೊಳಿಸಿದ್ದು, ಜಗತ್ತಿಗೂ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ಅವರ ಭಾಷಣದ 10 ಮುಖ್ಯ ಅಂಶಗಳ ಕಡೆಗೊಂದು ನೋಟ ಇಲ್ಲಿದೆ.

ಯಾವುದೇ ರೀತಿಯ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗಳನ್ನು ಭಾರತ ಸಹಿಸುವುದಿಲ್ಲ. ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ ಜತೆಗೆ ಭಯೋತ್ಪಾದನೆ ,ಮೂಲಸೌಕರ್ಯಗಳು ಕೆಲಸ ಮಾಡಿದರೆ ಅವುಗಳಿಗೆ ಏನು ಮಾಡಬೇಕೋ ಭಾರತ ಅದನ್ನು ಮಾಡಲಿದೆ. ಭಯೋತ್ಪಾದನೆ ವಿರುದ್ಧ ಭಾರತ ನಿಲುವು ಸ್ಪಷ್ಟವಾಗಿದೆ. ಯಾವುದೇ ಭಯೋತ್ಪಾದನೆ ದಾಳಿ ನಡೆದರೂ ಅದಕ್ಕೆ ತಕ್ಕ ಉತ್ತರವನ್ನು ಅದರ ಮೂಲಕ್ಕೇ ನೀಡಲಾಗುತ್ತದೆ. - ನರೇಂದ್ರ ಮೋದಿ, ಭಾರತದ ಪ್ರಧಾನಿ

ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಚಟುವಟಿಕೆಗಳು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂಬುದು ಈಗ ಜಗತ್ತಿಗೆ ಗ...