ಭಾರತ, ಮೇ 11 -- ಬ್ರಹ್ಮೋಸ್ ಶಕ್ತಿ ಏನು: ಪಹಲ್ಗಾಮ್ ಉಗ್ರ ದಾಳಿ ಬೆನ್ನಿಗೆ ಭಾರತ ಶುರುಮಾಡಿದ ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಿರುವ ಆಪರೇಷನ್ ಸಿಂದೂರ ಪಾಕಿಸ್ತಾನಕ್ಕೆ ಬಲವಾದ ಹೊಡೆತ ನೀಡಿದೆ. ಪಾಕಿಸ್ತಾನದಲ್ಲಿರುವ ಹಾಗೂ ಪಾಕ್ ಆಕ್ರಮಿತ ಜಮ್ಮು - ಕಾಶ್ಮೀರದ ಭಾಗದಲ್ಲಿರುವ 9 ಉಗ್ರ ನೆಲೆಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಇದರ ಬೆನ್ನಿಗೆ ಪಾಕಿಸ್ತಾನ ಅಪ್ರಚೋದಿತವಾದ ಡ್ರೋನ್ ದಾಳಿ ನಡೆಸಿದ ಕಾರಣ ಪ್ರತಿದಾಳಿ ನಡೆಸಿ, ಆ ಡ್ರೋನ್ ದಾಳಿ ಎಲ್ಲಿಂದ ಆಯಿತೆಂದು ತಿಳಿದು ಅದನ್ನು ನಾಶಪಡಿಸಿದೆ. ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಇರುವಾಗಲೇ ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್‌ ಇಂದು (ಮೇ 11) ಉದ್ಘಾಟನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬ್ರಹ್ಮೋಸ್ ಶಕ್ತಿ ಏನು ಎಂದು ಪಾಕಿಸ್ತಾನವನ್ನು ಕೇಳಿ ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

ಲಕ್ನೋದಲ್ಲಿ ಭಾನುವಾರ ನಡೆದ 'ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಅಂಡ್...