ಭಾರತ, ಮೇ 11 -- ಬ್ರಹ್ಮೋಸ್ ಶಕ್ತಿ ಏನು: ಪಹಲ್ಗಾಮ್ ಉಗ್ರ ದಾಳಿ ಬೆನ್ನಿಗೆ ಭಾರತ ಶುರುಮಾಡಿದ ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಿರುವ ಆಪರೇಷನ್ ಸಿಂದೂರ ಪಾಕಿಸ್ತಾನಕ್ಕೆ ಬಲವಾದ ಹೊಡೆತ ನೀಡಿದೆ. ಪಾಕಿಸ್ತಾನದಲ್ಲಿರುವ ಹಾಗೂ ಪಾಕ್ ಆಕ್ರಮಿತ ಜಮ್ಮು - ಕಾಶ್ಮೀರದ ಭಾಗದಲ್ಲಿರುವ 9 ಉಗ್ರ ನೆಲೆಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಇದರ ಬೆನ್ನಿಗೆ ಪಾಕಿಸ್ತಾನ ಅಪ್ರಚೋದಿತವಾದ ಡ್ರೋನ್ ದಾಳಿ ನಡೆಸಿದ ಕಾರಣ ಪ್ರತಿದಾಳಿ ನಡೆಸಿ, ಆ ಡ್ರೋನ್ ದಾಳಿ ಎಲ್ಲಿಂದ ಆಯಿತೆಂದು ತಿಳಿದು ಅದನ್ನು ನಾಶಪಡಿಸಿದೆ. ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಇರುವಾಗಲೇ ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹಬ್ ಇಂದು (ಮೇ 11) ಉದ್ಘಾಟನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬ್ರಹ್ಮೋಸ್ ಶಕ್ತಿ ಏನು ಎಂದು ಪಾಕಿಸ್ತಾನವನ್ನು ಕೇಳಿ ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಲಕ್ನೋದಲ್ಲಿ ಭಾನುವಾರ ನಡೆದ 'ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಅಂಡ್...
Click here to read full article from source
To read the full article or to get the complete feed from this publication, please
Contact Us.