ಭಾರತ, ಮಾರ್ಚ್ 29 -- Madanantheshwara Siddivinayaka Temple: ಕಾಸರಗೋಡು ನಗರದಿಂದ 7 ಕಿಲೋ ಮೀಟರು ಈಶಾನ್ಯಕ್ಕೆ ಮಧೂರು ಗ್ರಾಮವಿದೆ. ಇಲ್ಲಿರುವ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ಈಗಾಗಲೇ ಕಾರ್ಯಕ್ರಮಗಳು ಆರಂಭವಾಗಿವೆ. ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಮಧೂರು ಕ್ಷೇತ್ರದ ಕುರಿತು ಕ್ಷೇತ್ರದ ಕಚೇರಿಯ ಅಧಿಕೃತ ದಾಖಲೆಗಳಲ್ಲಿರುವ ವಿದ್ವಾನ್ ವೆಂಕಟರಾಜ ಪುಣಿಂಚಿತ್ತಾಯ ಅವರು ಬರೆದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸುತ್ತಲೂ ಅನತಿ ದೂರದಲ್ಲಿ ಎತ್ತರವಾದ ಗುಡ್ಡಗಳು, ಅದರ ತಪ್ಪಲಲ್ಲಿ ಫಲಭಾರದಿಂದ ಬಾಗುವ ತೆಂಗು - ಕಂಗು - ಬಾಳೆಯ ತೋಟ. ಸದಾ ಹಸುರಾಗಿ ಕಂಗೊಳಿಸುವ ಬಯಲಿನ ಮಧ್ಯದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಕಲಕಲ ನಾದದಿಂದ ಹರಿಯುವ ಮಧುವಾಹಿನಿ ನದಿ. ನದಿಯ ದಡದಲ್ಲಿ ಪೂರ್ವಾಭಿಮುಖವಾಗಿ ಶೋಭಿಸುವ ಗಜಪೃಷ್ಠಾಕಾರದ ಮೂರು ಅಂತಸ್ತಿನ ಶ್ರೀ ಮದನಂತೇಶ್ವರ ವಿನಾಯಕ ಬೃಹನ್ಮಂದಿರ. ಮೇ...