ಭಾರತ, ಏಪ್ರಿಲ್ 29 -- ಬ್ಯಾಂಕ್ ರಜೆ: ಭಾರತದಲ್ಲಿ ಇಂದಿನಿಂದ (ಏಪ್ರಲ್ 29) ಮೂರು ದಿನ ಬ್ಯಾಂಕ್ ರಜೆ. ಅಂದರೆ ಮೇ 1ರ ತನಕ ಬ್ಯಾಂಕಿಂಗ್ ವಹಿವಾಟು ಇರಲ್ಲ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಉಂಟಾಗಲಿದೆ. ಪರಶುರಾಮ ಜಯಂತಿ, ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ, ಕಾರ್ಮಿಕ ದಿನಾಚರಣೆ ನಿಮಿತ್ತ ಈ ರಜೆಗಳು ಒಟ್ಟಿಗೆ ಬಂದಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಗಳಿಗೆ ಈ ಮೂರು ದಿನ ರಜೆ ಇರಲಿದೆ. ಆಯಾ ಬ್ಯಾಂಕುಗಳ ವೆಬ್ಸೈಟ್ ಗಮನಿಸಿದರೆ ಗ್ರಾಹಕರಿಗೆ ರಜಾದಿನಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ವೆಬ್ಸೈಟ್ ಪ್ರಕಾರ, ಇಂದು (ಏಪ್ರಿಲ್ 29) ಶಿಮ್ಲಾ ಮತ್ತು ಇತರೆಡೆ ಪರಶುರಾಮ ಜಯಂತಿ ಕಾರಣ ಬ್ಯಾಂಕುಗಳಿಗೆ ರಜಾದಿನ. ಮಹಾವಿಷ್ಣು ದೇವರ ಆರನೇ ರೂಪವಾಗಿರುವ ಪರಶುರಾಮ ದೇವರ ಜಯಂತಿಯನ್ನು ಈ ಭಾಗದ ಜನರು ಬಹಳ ಭಕ್ತಿಶ್ರದ್ಧೆಯಿಂದ ಆಚರಿಸುತ್ತಾರೆ.
ಕರ್ನಾಟಕದಲ್ಲಿ ಏಪ್ರಿಲ್ 30 ರಂದು ಬಸವ ಜಯಂತಿ, ಅಕ್ಷಯ ತೃತೀಯದ ಕಾರಣ ಬ್ಯಾಂಕುಗಳಿಗೆ ರಜೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬ...
Click here to read full article from source
To read the full article or to get the complete feed from this publication, please
Contact Us.