ಭಾರತ, ಏಪ್ರಿಲ್ 1 -- ದಾವಣಗೆರೆ: 2024ರ ಅಕ್ಟೋಬರ್ 28 ರಂದು ದಾವಣಗೆರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನ್ಯಾಮತಿ ಶಾಖೆಯಿಂದ ಕಳುವಾಗಿದ್ದ ಚಿನ್ನವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಪೊಲೀಸರು ಆರು ಮಂದಿ ದರೋಡೆಕೋರರ ತಂಡವನ್ನು ಹಿಡಿದು ಬಂಧಿಸಿದ್ದಾರೆ. 17.7 ಕೆಜಿ ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಮಧುರೈ ಜಿಲ್ಲೆಯ ಉಸಲಂಪಟ್ಟಿ ಪಟ್ಟಣದ ಬಾವಿಯಲ್ಲಿ ಈ ಚಿನ್ನ ಪತ್ತೆಯಾಗಿದೆ. ಕದ್ದ ಚಿನ್ನದ ಆಭರಣಗಳೊಂದಿಗಿನ ಲಾಕರ್ ಬಾವಿಯಲ್ಲಿ ಪತ್ತೆಯಾಗಿದೆ.
ಚಿನ್ನ ಕದ್ದ ಆರೋಪಿಗಳನ್ನು ವಿಜಯಕುಮಾರ್ (30), ಆತನ ಸಹೋದರ ಅಜಯ್ಕುಮಾರ್ (28), ಅಭಿಷೇಕ (23), ಚಂದ್ರು (23), ಮಂಜುನಾಥ್ (32) ಮತ್ತು ಪರಮಾನಂದ (30) ಎಂದು ಗುರುತಿಸಲಾಗಿದೆ. ತನಿಖೆಯ ಸಮಯದಲ್ಲಿ, ದಕ್ಷಿಣ ಭಾರತದಲ್ಲಿ ಹಲವಾರು ಬ್ಯಾಂಕ್ ದರೋಡೆಗಳನ್ನು ನಡೆಸುತ್ತಿದ್ದ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಕಕ್ರಾಲಾದಿಂದ ಬ್ಯಾಂಕ್ ದರೋಡೆಕೋರರ ಮತ್ತೊಂದು ತಂಡವನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ...
Click here to read full article from source
To read the full article or to get the complete feed from this publication, please
Contact Us.