ಭಾರತ, ಏಪ್ರಿಲ್ 30 -- ಬೆಂಗಳೂರು: ಬೇಸಿಗೆ ರಜೆ ಹಿನ್ನೆಲೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಮೇ 1ರಿಂದ ಜಾರಿಗೆ ಬರುವಂತೆ ಕೆಲವು ರೈಲುಗಳ ವೇಗದ ಮಿತಿಯನ್ನು ಹೆಚ್ಚಿಸಲಾಗಿದೆ ಮತ್ತು ಸಮಯವನ್ನು ಪುನರ್‌ ನಿಗದಿ ಪಡಿಸಲಾಗಿದೆ. ಕೆಎಸ್‌ಆರ್‌ ಬೆಂಗಳೂರು- ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್‌ ಪ್ರೆಸ್‌ (ರೈಲಿನ ಸಂಖ್ಯೆ 12725), ಧಾರವಾಡ-ಕೆಎಸ್‌ಆರ್‌ ಬೆಂಗಳೂರು ಸಿದ್ದಗಂಗಾ ಡೈಲಿ ಎಕ್ಸ್‌ ಪ್ರೆಸ್‌ (ರೈಲಿನ ಸಂಖ್ಯೆ 12726) ಮತ್ತು ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ ಪ್ರೆಸ್‌ (ರೈಲಿನ ಸಂಖ್ಯೆ 16239) ಈ ಮೂರು ರೈಲುಗಳ ಸಮಯವನ್ನು ಪುನರ್‌ ನಿಗದಿ ಪಡಿಸಲಾಗಿದೆ.

ರೈಲುಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾನ್ಪುರ ಸೆಂಟ್ರಲ್‌ ನಡುವೆ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ರೈಲು ಸಂಖ್ಯೆ 04131 ಕಾನ್ಪುರ ಸೆಂಟ್ರಲ್‌ ನಿಲ್ದಾಣದಿಂದ ಪ್ರತಿ ಭಾನುವಾರ ರಾತ್ರಿ 7.50ಕ್ಕೆ ಹೊರಟು ಪ್ರತಿ ಮಂಗಳವಾರ ಸಂಜೆ 6.30ಕ್ಕೆ ಬೆಂಗಳೂರು ಸರ್ ಎ...