ಭಾರತ, ಏಪ್ರಿಲ್ 10 -- Bengaluru Summer Vacation: ಮನೆ ಬೀಗ ಒಡೆದ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬೇಸಿಗೆ ರಜೆ ಸಿಕ್ತು ಅಂತ ಬೆಂಗಳೂರು ಬಿಟ್ಟು ಊರಿಗೋ ಅಥವಾ ಪ್ರವಾಸಕ್ಕೋ ಹೋಗುವುದು ಹೇಗೆ ಎಂಬ ಚಿಂತೆ ಬೇಡ. ಬೆಂಗಳೂರು ಪೊಲೀಸರ ಹೊಸ ಉಪಕ್ರಮದ ಕಡೆಗೆ ಗಮನಕೊಡಿ. ಅವರ ಸಲಹೆಗಳನ್ನು ಪಾಲಿಸಿ, ಮನೆಯ ಭದ್ರತೆಯನ್ನು ಕಾಪಾಡಬಹುದು. ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ಮಹಾನಗರ ಪೊಲೀಸರು ಈ ಉಪಕ್ರಮ ಜಾರಿಗೊಳಿಸಿದ್ದಾರೆ.
ಬೇಸಿಗೆ ರಜೆ ಸಿಕ್ತು ಅಂತ ಪ್ರವಾಸಕ್ಕೋ ಅಥವಾ ಊರಿಗೋ ಹೊರಟರೆ, ಅಂತಹ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕುವುದನ್ನು ಮರೆಯಬಾರದು. ಈ ವಿಚಾರದಲ್ಲಿ ಎಚ್ಚರವಹಿಸಬೇಕು ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸಲಹೆ ನೀಡಿದ್ದಾರೆ.
ಇನ್ನು, ಬೆಂಗಳೂರು ದಕ್ಷಿಣ ಪೊಲೀಸರು ಪ್ರಾಯೋಗಿಕವಾಗಿ ಹೊಸ ಉಪಕ್ರಮ ಜಾರಿಗೊಳಿಸಿದ್ದು, ಅದು ನಾಗರಿಕ ಕೇಂದ್ರಿತವಾದ ಸುರಕ್ಷಾ ಕ್ರಮವಾಗಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ಅದು ಜಾರಿಗೆ ಬಂದಿದೆ. ಒಂದು ದಿನಕ್ಕಿಂತ ಹೆಚ್...
Click here to read full article from source
To read the full article or to get the complete feed from this publication, please
Contact Us.