Bengaluru, ಮೇ 7 -- ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ವಿಶೇಷವಾಗಿ ಮಳೆ ಬಂದಾಗ, ಸೊಳ್ಳೆಗಳು ಮನೆಯೊಳಗೆ ಮತ್ತು ಹೊರಗೆ ವೇಗವಾಗಿ ಹರಡುತ್ತವೆ. ಸ್ವಲ್ಪ ಅಜಾಗರೂಕತೆಯು ಡೆಂಗ್ಯೂ, ಮಲೇರಿಯಾ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಬಹುತೇಕರು ರಾಸಾಯನಿಕಗಳತ್ತ ಮೊರೆ ಹೋಗುತ್ತದೆ. ಆದರೆ, ರಾಸಾಯನಿಕ ಸೊಳ್ಳೆ ನಿವಾರಕವನ್ನು ದಿನವಿಡೀ ಹಚ್ಚುವುದು ಮಕ್ಕಳ ಉಸಿರಾಟ ಮತ್ತು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಕೆಲವು ಮನೆಮದ್ದುಗಳು ಸೊಳ್ಳೆ ಮತ್ತು ನೊಣಗಳ ಭಯವನ್ನು ತೊಡೆದುಹಾಕಬಹುದು.

ನೀವು ಅನೇಕ ರೀತಿಯಲ್ಲಿ ಸೊಳ್ಳೆಯನ್ನು ತೊಡೆದುಹಾಕಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದಿದ್ದರೆ ಇಲ್ಲಿ ನೀಡಿರುವ ಸಿಂಪಲ್ ಟ್ರಿಕ್ಸ್ ಅನ್ನು ಪಾಲಿಸಬಹುದು. ಇದರಿಂದ ಸೊಳ್ಳೆ, ಸಣ್ಣ ಕೀಟಗಳು ಮತ್ತು ನೊಣಗಳು ಕೂಡ ವೇಗವಾಗಿ ಓಡಿಹೋಗುತ್ತವೆ. ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಸೊಳ್ಳೆಗಳನ್ನು ತೊಡೆದುಹಾಕಬಹುದು

ಮನೆಯಲ್ಲಿ ಇರಿಸಲಾದ ಕೆಲವು ವಸ್ತುಗಳು ಸೊಳ್ಳೆ ನಿವಾರಕಗಳಿಗೆ ಅತ್ಯುತ್ತಮವಾಗಿವೆ. ಕರ್ಪೂರ, ತುಳಸಿ, ಬ...