Mysuru, ಏಪ್ರಿಲ್ 26 -- ಮೈಸೂರು: ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿ ಕೇಳಿ ಸಾಕಾಗಿದೆ. ಅಧಿಕಾರಿಗಳು ಮನವಿ ಸ್ವೀಕರಿಸುತ್ತಾರೆ. ಜನಪ್ರತಿನಿಧಿಗಳು ಇವರ ಕೆಲಸ ಮಾಡಿ ಎಂದು ನಿರ್ದೇಶನ ನೀಡುತ್ತಾರೆ. ಆದರೆ ಇದು ಹಲವಾರು ವರ್ಷಗಳಿಂದ ನಡೆದಿದೆ. ನಮ್ಮ ಬೇಡಿಕೆ ಈಡೇರುತ್ತಿಲ್ಲ. ನಮ್ಮ ಕಷ್ಟಗಳನ್ನು ಕೇಳಬೇಕಾದ ಸರ್ಕಾರವು ದನಿಯೂ ಕೇಳುತ್ತಿಲ್ಲ. ಕಷ್ಟಗಳು ಕಾಣಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಆದರೆ ನಾವು ಬದುಕುವುದು ಹೇಗೆ, ಸರ್ಕಾರವೇ ನಮ್ಮ ಕೈ ಹಿಡಿಯದೇ ಇದ್ದರೆ ಏನೋ ಮಾಡಬೇಕು ಹೇಳಿ. ಈ ಕಾರಣದಿಂದಲೇ ನಾವೀಗ ದಿಢೀರ್‌ ಪ್ರತಿಭಟನೆ ಮಾಡುತ್ತಿದ್ದೇವೆ. ನಿಮ್ಮಿಂದ ಸ್ಪಷ್ಟ ಉತ್ತರ ಸಿಗೋವರೆಗೂ ನಮ್ಮ ಹೋರಾಟವೂ ನಿಲ್ಲೋಲ್ಲ. ನಮಗೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ಇದು ಮೈಸೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ವಿಕಲಚೇತನರ ಹಕ್ಕೊತ್ತಾಯಗಳಿವು.

Published by HT Digital Content Services with permission from HT Kannada....