ಭಾರತ, ಮೇ 13 -- ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅಡಿಯಲ್ಲಿ ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್‌ ಅಭಿವೃದದಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಕೂಸೂ ಹೌದು. ಅವರ ಕನಸಿನಂತೆ ಈ ಟೌನ್‌ ಶಿಪ್‌ ನಿರ್ಮಾಣವಾದರೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದಲ್ಲಿ ಈಗಿನ ಬೆಂಗಳೂರನ್ನೂ ಹಿಂದಿಕ್ಕುವುದರಲ್ಲಿ ಸಂಶಯವೇ ಇಲ್ಲ.

ವಿನೂತನ ಟೌನ್‌ ಶಿಪ್ ಯೋಜನೆಯಿಂದ ಈ ಭೂ ಭಾಗ ಆಧುನಿಕ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲಿದೆ. ಯೋಜನಾ ಬದ್ಧವಾಗಿ ರಚಿಸಲಾಗಿರುವ ದೆಹಲಿ ಚಂಡೀಗಡ ಮೊದಲಾದ ಅತ್ಯುತ್ತಮ ನಗರಗಳ ಅಧ್ಯಯನ ನಡೆಸಿ ಗ್ರೇಟರ್‌ ಬೆಂಗಳೂರು ವಿನ್ಯಾಸ ಮಾಡಲಾಗುತ್ತದೆ. ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿಯಲ್ಲಿ ದೇಶಕ್ಕೆ ಒಂದು ಬೆಂಚ್‌ ಮಾರ್ಕ್‌ ಹಾಕಿಕೊಡಲಿದೆ ಎಂದು ಡಿಕೆ ಶಿವಕುಮಾರ್‌ ಹೇಳುತ್ತಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಡದಿ ಹೋಬಳಿಗೆ ಸೇರಿರುವ ಬೈರಮಂಗಲ, ಕಂಚುಗಾರನಹಳ್ಳಿ ...