ಭಾರತ, ಮೇ 12 -- ಬೆಂಗಳೂರು: ಗಣಿತ ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿ ಮತ್ತು ಸುಲಭವಾಗಿಸಲು, ಬೆಂಗಳೂರಿನಲ್ಲಿರುವ ಡಿಎಸ್‌ಐಆರ್-ಮಾನ್ಯತೆ ಪಡೆದ ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ, ಗಣಿತ ಕಲಿಕೆಯನ್ನು ಪರಿವರ್ತಿಸಲು 'ಧಾತು' ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ತಂತ್ರಜ್ಞಾನ-ಆಧಾರಿತ ವೇದಿಕೆಯನ್ನು ಬಳಸಿಕೊಂಡು, 'ಧಾತು' ಗಣಿತವನ್ನು ಇನ್ನಷ್ಟು ಸುಲಭ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅರ್ಥವಾಗುವಂತೆ ಮಾಡುವ ಗುರಿ ಹೊಂದಿದೆ. ಈ ಕಾರ್ಯಕ್ರಮ ಉಚಿತವಾಗಿದ್ದು, 2025-26ರಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿ 2027ರ ವೇಳೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಶಾಲೆಗಳನ್ನು ತಲುಪುವ ಗುರಿ ಹೊಂದಿರುವ ಈ ಯೋಜನೆ, ವೈವಿಧ್ಯಮಯ ಸಮುದಾಯಗಳಿಗೆ ಗುಣಮಟ್ಟದ ಗಣಿತ ಶಿಕ್ಷಣವನ್ನು ನೀಡಲಿದೆ.

'ಪ್ರಯೋಗ', ಎನ್‌ಸಿಇಆರ್‌ಟಿ ಪಠ್ಯಕ್ರಮದ ಆಧಾರದ ಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಗ್ರ ಗಣಿತ ಕಲಿಕಾ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಲು 2021ನೇ ಸಾಲಿನ ಟ್ಯೂರಿಂಗ್ ಪ್ರಶಸ್...