ಭಾರತ, ಏಪ್ರಿಲ್ 3 -- Viral Video: ಭಾರತೀಯ ರೈಲ್ವೆಯ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕೆಂಗೇರಿ ಸಮೀಪ ಬಿಎಂಟಿಸಿ ಬಸ್‌ ಅಡ್ಡ ನಿಂತ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ (ಏಪ್ರಿಲ್ 2) ಬೆಳಿಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, 20 ನಿಮಿಷಲ್ಲಿ ಬಸ್ ತೆರವುಗೊಳಿಸಿ ರೈಲು ಸಂಚಾರಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.

ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಸಮೀಪಿಸುತ್ತಿರುವಂತೆಯೇ, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಬಸ್ ಕೆಂಗೆರಿ ಸಮೀಪ ರಾಮೋಹಲ್ಲಿ ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲ್ವೆ ಟ್ರ್ಯಾಕ್‌ನಲ್ಲಿ ಸಿಲುಕಿಕೊಂಡು ಕಳವಳಕ್ಕೆ ಕಾರಣವಾಗಿತ್ತು. ಬುಧವಾರ ಮುಂಜಾನೆ ನಡೆದ ಈ ಘಟನೆಯು ಬೆಂಗಳೂರಿನಲ್ಲಿ ರೈಲ್ವೆ ದಾಟುವ ಸುರಕ್ಷತೆಯ ಬಗ್ಗೆ ವ್ಯಾಪಕವಾದ ಕಳವಳವನ್ನು ಹುಟ್ಟುಹಾಕಿತು.

ಮನಿ ಕಂಟ್ರೋಲ್ ವರದಿ ಪ್ರಕಾರ, ಬಿಎಂಟಿಸಿ ಬಸ್ ಏರ್‌ಲಾಕ್ ಸಿಸ್ಟಮ್‌ ಕೆಟ್ಟ ಕಾ...