Bangalore, ಮೇ 23 -- ಕರ್ನಾಟಕದ ಪ್ರಮುಖ ಹಣ್ಣುಗಳಲ್ಲಿ ಒಂದಾದ ಮಾವು ಈಗ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಜನ ಮಾವು ಖರೀದಿಸಿ ಸವಿಯಲು ಅನುವಾಗುವಂತೆ ತೋಟಗಾರಿಕೆ ಇಲಾಖೆ ಮಾವಿನ ಮೇಳ ಹಮ್ಮಿಕೊಂಡಿದೆ.

ಹಲಸಿನ ಮೇಳವೂ ಜತೆಯಲ್ಲಿ ಇದ್ದು. ಹಲವು ರೈತರು ನೇರವಾಗಿ ಬೆಂಗಳೂರು ಸಹಿತ ಎಲ್ಲೆಡೆ ನಡೆದಿರುವ ಮೇಳಗಳಿಗೆ ತಂದಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಮೇ 26 ರವರೆಗೆ ಕೊಡಗಿನ ಹಾಪ್ ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ.

ಬೆಂಗಳೂರಿನ ಲಾಲ್‌ಬಾಗ್‌ನ ಡಾ.ಎಂ.ಎಚ್.‌ಮರೀಗೌಡ ಸಭಾಂಗಣದಲ್ಲಿ ನಡೆದಿರುವ ಮೂರು ದಿನಗಳ ಮಾವು ಮೇಳಕ್ಕೆ ಮೊದಲ ದಿನವಾದ ಶುಕ್ರವಾರವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಹಲವು ರೈತರು ತಾವು ಬೆಳದ ಹಣ್ಣುಗಳನ್ನೇ ಮೇಳಗಳಿಗೆ ತಂದಿದ್ದಾರೆ. ಬಗೆಬಗೆಯ ಹಣ್ನುಗಳು ಸಾವಯವ ರೀತಿಯಲ್ಲಿ ಬೆಳೆದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಹಣ್ಣು ಖರೀದಿ ಮಾಡುತ್ತಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಕುಪ್ಪಣ್ಣ ಪಾರ್...