Bengaluru, ಮೇ 26 -- ಮೇ 31ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ‌ಸಭಾಂಗಣದಲ್ಲಿ ಭಾರತ ಕಂಡ ಲೆಜೆಂಡರಿ ಕಲಾವಿದ, ಬಾಲಿವುಡ್ ಶೆಹೆಂಶಾ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಸುಮಾರು 4 ಘಂಟೆಗಳ ಕಾಲ ನಡೆಯಲಿರುವ ಈ ರಸಮಂಜರಿ ಕಾರ್ಯಕ್ರಮದಲ್ಲಿ ಭಾರತದ ಅತ್ಯದ್ಭುತ ಗಾಯಕರಿಂದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಭಾಧುರಿ ಹಾಗೂ ಐಶ್ವರ್ಯ ರೈ ಅಭಿನಯದ ಸೂಪರ್ ಹಿಟ್ ಹಾಡುಗಳ ಗೀತ ಗಾಯನದ ಬ್ಲಾಕ್ಬಸ್ಟರ್ ಕಾರ್ಯಕ್ರಮದ ನಡೆಯಲಿದೆ.

AV ಕಾರ್ಪ್ ಸಂಸ್ಥೆ (ಅಶೋಕ್ ಬೊಹ್ರ- ಡಾ ವಿದ್ಯಾ ಸಾಗರ್) ಆಯೋಜಿಸಿರುವ ಈ ಕಾರ್ಯಕ್ರಮವು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಪರಿಕಲ್ಪನೆ ಆಧಾರಿತ ಸಂಗೀತ ಕಚೇರಿಗಳನ್ನು ಮನೆ ತುಂಬಿದ ಪ್ರೇಕ್ಷಕರಿಗೆ ಕ್ಯುರೇಟ್ ಮಾಡಿ ನಡೆಸುವಲ್ಲಿ ಎವಿ ಕಾರ್ಪ್‌ ಸಂಸ್ಥೆ ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ...