Bengaluru, ಮೇ 26 -- ಬೆಂಗಳೂರು: ಮಾನ್ಸೂನ್ ಪೂರ್ವ ಮಳೆಗೆ ಬೆಂಗಳೂರಿನ ಜನತೆ ಹೈರಾಣಾಗಿದ್ದಾರೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲ, ಮಳೆಯ ಜೊತೆಗೆ ವೈರಲ್ ಸೋಂಕುಗಳು ಮತ್ತು ಉಸಿರಾಟದ ಕಾಯಿಲೆಗಳು ಹೆಚ್ಚಾಗುತ್ತಿವೆ. ನಗರದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಶೀತ, ಕೆಮ್ಮು, ಜ್ವರ ತರಹದ ಲಕ್ಷಣಗಳು ಮತ್ತು ಕೆಲವು ಮಕ್ಕಳಲ್ಲಿ ಮುಖದ ಮೇಲೆ ವಿಚಿತ್ರವಾದ ದದ್ದುಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದು ಅನೇಕ ಪೋಷಕರನ್ನು ಆತಂಕಕ್ಕೆ ತಳ್ಳಿದೆ.

ಹಠಾತ್ ತಾಪಮಾನ ಕುಸಿತ, ಹೆಚ್ಚುತ್ತಿರುವ ಆರ್ದ್ರತೆಯಿಂದ ಇಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿದೆ. ಮುಚ್ಚಿದ ಸ್ಥಳ, ಕಳಪೆ ಗಾಳಿ ಇತ್ಯಾದಿ ವೈರಸ್ ಬೇಗನೆ ಹರಡಲು ಕಾರಣವಾಗುತ್ತದೆ. ನೆಗಡಿ, ಕೆಮ್ಮು ಮತ್ತು ಜ್ವರ ಇತ್ಯಾದಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಯ ಒಪಿಡಿಯಲ್ಲಿ ಸುಮಾರು ಶೇ. 60 ರಿಂದ 70ರಷ್ಟು ಉಸಿರಾಟದ ವೈರಲ್ ಪ್ರಕರಣಗಳು ದಾಖಲಾಗಿದೆ. ಹಠಾತ್ ಹವಾಮಾನ ಬದಲಾವಣೆಗಳು ಮತ್ತು ಆರ್ದ್ರತೆಯ ಏರಿಕೆಯು ವೈರಸ್‍ಗಳು ಅಭಿವ...