Bangalore, ಮೇ 18 -- ಬೆಂಗಳೂರಿನಲ್ಲಿ ಶನಿವಾರ ಸಂಜೆ ಎಡಬಿಡದೇ ಸುರಿದ ಭಾರೀ ಮಳೆಯಿಂದಾಗಿ ಬಿಳೇಕಹಳ್ಳಿ ರಸ್ತೆಯೇ ಹೊಳೆಯ ರೂಪ ಪಡೆದಿತ್ತು. ವಾಹನ ಸವಾರರು ಮಳೆ ನೀರಿನಲ್ಲೇ ಸಂಚರಿಸುವಂತಾಯಿತು,

ಬೆಂಗಳೂರಿನ ವರ್ತೂರು ಬಳಿಯೂ ಭಾರೀ ಮಳೆ ಸುರಿದು ರಸ್ತೆ ಸಂಚಾರ ನಿಧಾನವಾಯಿತು.

ಕೆಲವು ಬಡಾವಣೆಗಳ ಮುಖ್ಯ ರಸ್ತೆಯಲ್ಲಂತೂ ಮಳೆ ನೀರು ಚರಂಡಿಯ ಬದಲು ರಸ್ತೆಯಲ್ಲಿಯೇ ಹರಿಯುತ್ತಿದುದ್ದು ಕಂಡು ಬಂದಿತು.

ಬೆಂಗಳೂರಿನಲ್ಲಿ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವವರು ಮಳೆಯಿಂದ ತೊಂದರೆ ಅನುಭವಿಸಿದರು. ಸಂಚಾರ ದಟ್ಟಣೆ ಎಲ್ಲ ಕಡೆಯೂ ಇತ್ತು.

ಬೆಂಗಳೂರಿನಲ್ಲಿ ಮಳೆ ಸುರಿದಿದ್ದರಂದ ಕೆಲವು ಕಡೆ ಬಸ್‌ಗಳು ಕೆಟ್ಟು ಸಂಚಾರಕ್ಕೆ ಅಡಚಣೆಯಾಯಿತು.ಸಂಚಾರ ಪೊಲೀಸರು ವಾಹನ ತೆರವಿಗೆ ಕ್ರಮ ವಹಿಸಿದರು.

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಣೆಯಾಗಿದ್ದರಿಂದ ಬಿಬಿಎಂಪಿ ಸಿಬ್ಬಂದಿ ಸಹಜ ನೀರು ಹರಿಯಲು ತುರ್ತು ಕ್ರಮ ಕೈಗೊಂಡರು.

ಬೆಂಗಳೂರು ಮಳೆಯಿಂದ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ನಿಂತು ಹಲವು ಮನ...