Bengaluru, ಮೇ 6 -- ಬೆಂಗಳೂರು: ಹಲವು ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಜಯನಗರ ಮತ್ತು ಗಿರಿನಗರ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 57 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನಾಭರಣ ಮತ್ತು ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಜಯನಗರ ಪೊಲೀಸ್ ಠಾಣೆ ಪೊಲೀಸರು ಮನೆ ಕಳವು ಮತ್ತು ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ರೂ. 32 ಲಕ್ಷ ಮೌಲ್ಯದ 390 ಗ್ರಾಂ ಚಿನ್ನದ ಗಟ್ಟಿ ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ ನಲ್ಲಿ ದೂರೊಂದು ದಾಖಲಾಗಿರುತ್ತದೆ. ದೂರಿನಲ್ಲಿ ಪಿರ್ಯಾದುದಾರರು ಆರ್.ಆರ್ ನಗರ ನಿವಾಸಿಯಾಗಿದ್ದು, ಜಯನಗರದ 8ನೇ ಬ್ಲಾಕ್ನ, ಸಂಗಮ್ ಸರ್ಕಲ್ ನಲ್ಲಿ ಸ್ವೀಟ್ ಅಂಗಡಿಯೊಂದನ್ನು ನಡೆಸುತ್ತಿರುತ್ತಾರೆ. ದೂರುದಾರರು ತಮ್ಮ ದ್ವಿಚಕ್ರ ವಾಹನವನ್ನುಅಂಗಡಿಯ ಮುಂದೆ ನಿಲ್ಲಿಸಿ ಸ್ವೀಟ್ ತಯಾರಿಸಲು ಮತ್ತೊಂದು ಅಂಗಡಿಗೆ ಹೋಗಿರುತ್ತಾರೆ. ಮರುದಿನ ಬಂದು ನೋಡಿದ...
Click here to read full article from source
To read the full article or to get the complete feed from this publication, please
Contact Us.