ಭಾರತ, ಮಾರ್ಚ್ 22 -- ದೂತ ಸಮೀರ್ ವಿಡಿಯೊ ಸದ್ದು ಮಾಡಿದ ನಂತರ ಹಲವರು ಸೌಜನ್ಯಾ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಫೇಸ್‌ಬುಕ್ ಪೋಸ್ಟ್‌ ಹಲವರ ಗಮನ ಸೆಳೆದಿದೆ. ಮಾರ್ಚ್ 22, 23ರಂದು ಬೆಂಗಳೂರಿನಲ್ಲಿ ಲೇಖಕಿ ಡಾ ಎಚ್.ಎಸ್.ಶ್ರೀಮತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಲೇಖಕಿಯರ ಸಮ್ಮೇಳನದಲ್ಲಿ ಸೌಜನ್ಯಾ ಪರ ಲೇಖಕಿಯರ ಸಂಘಟಿತ ದನಿ ಮೊಳಗುವಂತೆ ಆಗಲಿ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಅವರ ಬರಹವನ್ನು ಇಲ್ಲಿ ಯಥಾವತ್ತಾಗಿ ಮರುಪ್ರಕಟಿಸಲಾಗಿದೆ. ಕೆಳಗಿರುವುದು ಅವರ ಬರಹ.

***

ಎಲ್ಲ ಕಾಲಗಳಲ್ಲಿಯೂ ಆಯಾ ಕಾಲಗಳು ನಾವು ಮನುಷ್ಯರೆಂದು ಸಾಬೀತುಪಡಿಸಲು ಅಗ್ನಿಪರೀಕ್ಷೆಗಳನ್ನು ಒಡ್ಡುತ್ತಲೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಸೆಲೆಕ್ಟಿವ್ ಆಗಿ ಉಳಿಯುವ ಅವಕಾಶ ಇರುವುದಿಲ್ಲ. ನಾವು ಎಡವೂ ಅಲ್ಲ, ಬಲವೂ ಅಲ್ಲ, ನಾವು ನಿಷ್ಪಕ್ಷಪಾತಿಗಳು ಎಂದೆಲ್ಲ ಸ್ವಷ್ಟೀಕರಣ ಕೊಡುವ ಹಾಗಿಲ್ಲ.

ಅಂತಹದ್ದೊಂದು ಸಂದರ್ಭವನ್ನು ಸೋದರ...