Bangalore, ಏಪ್ರಿಲ್ 17 -- ಬೆಂಗಳೂರು:ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ನಮ್ಮ ಪಾಡಿಗೆ ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಮುಸ್ಲಿಂ ಯುವಕರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಮುಸ್ಲಿಂ ಯುವಕರು ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹಕಾರ ನಗರದ ಪವನ್ ಕುಮಾರ್, ವಿನಾಯಕ ಮತ್ತು ರಾಹುಲ್ ದೂರು ನೀಡಿದ ಯುವಕರು.

ಈ ಪ್ರಕರಣವನ್ನು ಚಿತ್ರಿಸಿಕೊಂಡಿರುವ ವಿಡಿಯೋ ದಾಖಲೆಯನ್ನು ಯುವಕರು ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ

ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಯಾರು ಎನ್ನುವುದು ತಿಳಿದು ಬಂದಿದ್ದು, ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದೂ ಹೇಳಿದ್ದಾರೆ.

ಬೈಕ್ ಖರೀದಿಸಲು ಮಧ್ಯಾಹ್ನ 3.30ರ ವೇಳೆಗೆ ನಮ್ಮದೇ ಕಾರಿನಲ್ಲಿ ಕೆ.ಜಿ ಹಳ್ಳಿಯಿಂದ ಎಂ.ಎಸ್.ಪಾಳ್ಯಕ್ಕೇ ಹೋಗುತ್ತಿದ್ದೆವು. ನಮ್ಮ ಪಾಡಿಗೆ ನಾವು ಕಾರಿನಲ್ಲಿ ಶ್ರೀರಾಮನ ಭಾವಚಿತ್...