Bangalore, ಮೇ 14 -- ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯಲ್ಲಿ ಸುರಿದ ಭಾರೀ ಮಳೆಯಿಂದ ದ್ವೀಪದ ವಾತಾವರಣ ನಿರ್ಮಾಣವಾಗಿತ್ತು. ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿಯೇ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು,

ಬೆಂಗಳೂರಿನ ಬಿಳೇಕಹಳ್ಳಿ ಬಳಿ ಭಾರೀ ಮಳೆಯಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರು ಅದರಲ್ಲಿಯೇ ಪ್ರಯಾಸ ಪಟ್ಟುಕೊಂಡು ಮುಂದೆ ಹೋದಬೇಕಾಯಿತು.

ಬೆಂಗಳೂರಿನ ಬನ್ನೇರಘಟ್ಟ ರಸ್ತೆಯ ಹಲವು ಭಾಗದಲ್ಲಿ ರಸ್ತೆ ತುಂಬಾ ನೀರೋ ನೀರು. ಮಳೆಯಿಂದ ಸವಾರರು ಹರಸಾಹಸ ಪಟ್ಟುಕೊಂಡೇ ಮುಂದೆ ಹೋದರು.

ಬೆಂಗಳೂರಿಕನ ಇಂದಿರಾನಗರದಲ್ಲೂ ಭಾರೀ ಮಳೆಯಿಂದ ಮುಖ್ಯ ರಸ್ತೆಯಲ್ಲೇ ಮರದ ಕೊಂಬೆ ಉರುಳಿ ಬಿದ್ದು ಅನಾಹುತ ತಪ್ಪಿತು.

ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಸಂಚರಿಸಿದ ಪರಿಣಾಮವಾಗಿ ಬಿಬಿಎಂಪಿಯವರು ಅಲ್ಲಲ್ಲಿ ನೀರು ಸುಗಮ ಸಂಚಾರಕ್ಕೆ ಮುಂದಾದರು,

ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೃಹತ್‌ ಗಾತ್ರದ ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಕಾರಿನ ಮೇಲೆ ...