ಭಾರತ, ಫೆಬ್ರವರಿ 13 -- ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.12) ಸಂಚಿಕೆಯಲ್ಲಿ ಸುಧಾಮೂರ್ತಿಗಳ ಮನೆಯಲ್ಲಿ ಪೂಜೆ ಆರಂಭವಾಗಿರುತ್ತದೆ. ಮನೆಯವರೆಲ್ಲರೂ ಆಕಾಶ್‌-ಪುಷ್ಪಾ ಪೂಜೆಗೆ ಕುಳಿತುಕೊಳ್ಳಲಿ ಎಂದು ಬಯಸುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ನಾನು ಪೂಜೆಗೆ ಕುಳಿತುಕೊಳ್ಳಲ್ಲ ಎಂದು ಹೇಳುವ ಮೂಲಕ ಶಾಕ್‌ ನೀಡುತ್ತಾನೆ ಆಕಾಶ್‌. ಕೊನೆಗೆ ನಾನು-ಪುಷ್ಪಾ ಬದಲು ಈ ಮನೆಯ ಹಿರಿಯರಾದ ಅಜ್ಜಿ-ತಾತ ಪೂಜೆಗೆ ಕುಳಿತುಕೊಳ್ಳಲಿ, ಅವರು ಪೂಜೆಗೆ ಕುಳಿತರೆ ಎಲ್ಲರಿಗೂ ಶ್ರೇಯಸ್ಸು ಎನ್ನುತ್ತಾರೆ. ಇದರಿಂದ ಎಲ್ಲರಿಗೂ ಖುಷಿ ಹಾಗೂ ಸಾಮಾಧಾನ ಸಿಗುತ್ತದೆ. ಕೊನೆಗೆ ಸುಧಾಮೂರ್ತಿ ಹಾಗೂ ಅವರ ಗಂಡ ಸೇರಿ ಪೂಜೆಗೆ ಕುಳಿತುಕೊಳ್ಳುತ್ತಾರೆ. ಮನೆಯಲ್ಲಿ ಪೂಜೆ ಸಾಂಗವಾಗಿ ನಡೆಯುವ ಹೊತ್ತಿಗೆ ಎಂಟ್ರಿ ಕೊಡುತ್ತಾಳೆ ಗಿರಿಜಾ.

ಆಟೊ ಸಿಗದೇ ಪರದಾಡುವ ಗಿರಿಜಾಗೆ ಕೊನೆಗೂ ಬೃಂದಾವನಕ್ಕೆ ತೆರಳಲು ಒಂದು ಆಟೊ ಸಿಗುತ್ತದೆ. ಆಟೊ ಹಿಡಿದು ಬರುವ ಆಕೆ, ಬರುವಾಗಲೇ ಬೃಂದಾವನ ಬೋರ್ಡ್‌ ಮೇಲೆ ಕೆಸರು ಸಿಡಿಸುತ್ತಾಳೆ, ಅಂದರೆ ಆಟೊದಿಂದ ಕೆಸರು ನೇರವಾಗಿ ಬೋರ್ಡ್‌ ...