Bangalore, ಮೇ 21 -- ಭಾರತದ ಹಿನ್ನೆಲೆಯ ಹಲವು ಲೇಖಕರು ತಮ್ಮ ಅನನ್ಯ ಕೃತಿಗಳಿಗೆ ಈವರೆಗೂ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಐದೂವರೆ ದಶಕದ ಅವಧಿಯಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಭಾರತೀಯ ಮೂಲದವರಾದರೂ ಟ್ರಿನಿಟಾಡ್ನಲ್ಲಿ ಜನಿಸಿದ ವಿ.ಎಸ್.ನೈಪಾಲ್ ಅವರು ಬೂಕರ್ ಗೌರವ ಪಡೆದ ಮೊದಲ ಭಾರತ ಹಿನ್ನೆಲೆಯ ಲೇಖಕ. 1971 ರಲ್ಲಿ ಅವರಿಗೆ "ಇನ್ ಎ ಫ್ರೀ ಸ್ಟೇಟ್" ಕೃತಿಗಾಗಿ ಬೂಕರ್ ಪ್ರಶಸ್ತಿ ನೀಡಲಾಯಿತು. ಆನಂತರ ಎರಡು ಬಾರಿ ಬೂಕರ್ ಪ್ರಶಸ್ತಿಗೆ ಅವರ ಕೃತಿಗಳು ಪಟ್ಟಿ ಮಾಡಿತ್ತಾದರೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.
ಭಾರತೀಯ ಹಿನ್ನೆಲೆಯ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಮಿಡ್ನೈಟ್ಸ್ ಚಿಲ್ಡ್ರನ್ ಎನ್ನುವ ಕೃತಿಗೆ 1981 ರಲ್ಲಿ ಬೂಕರ್ ಪ್ರಶಸ್ತಿ ಲಭಿಸಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ದಿನವೇ ಜನಿಸಿದ್ದ ರಶ್ದಿ ಈ ದೇಶದ ಬೆಳವಣಿಗೆಯ ಹಾದಿಯನ್ನಾಧಿರಿ ಮಿಡ್ನೈಟ್ಸ್ ಚಿಲ್ಡ್ರನ್ ಎನ್ನುವ ಕೃತಿ ರಚಿಸಿದ್ದಾರೆ.
ಅರುಂಧತಿ ರಾಯ್ ಅವರ 'ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಯು 1997 ರಲ್ಲಿ ಬೂಕ...
Click here to read full article from source
To read the full article or to get the complete feed from this publication, please
Contact Us.