ಭಾರತ, ಏಪ್ರಿಲ್ 25 -- ರಂಗಸ್ವಾಮಿ ಮೂಕನಹಳ್ಳಿ ಬರಹ: ನಿಮಗೆಲ್ಲಾ ಗೊತ್ತಿದೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ ನನಗೆ ನೆನಪಿದೆ. ನಮ್ಮೂರಿಗೆ ಒಂದು ಐದತ್ತು ಜನರ ಗುಂಪು ಬರುತ್ತಿತ್ತು. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಬರುತ್ತಿದ್ದರು. ಇಲ್ಲವೇ ಊರಿನಲ್ಲಿ ಇಲಿಗಳ ಕಾಟ , ಬೆಕ್ಕಿನ ಕಾಟ ಹೆಚ್ಚಾಗಿದೆ ಎಂದು ಹೇಳಿದರೆ ಅವರು ಬರುತ್ತಿದ್ದರು ಎನ್ನುವ ನೆನಪು . ಅವರನ್ನು ಶಿಳ್ಳೆ ಕ್ಯಾತರು ಎನ್ನುತ್ತಿದ್ದ ನೆನಪು. ಅವತ್ತಿಗ್ಗೆ ಇಂದಿನ ರೀತಿ ಪೆಸ್ಟ್ ಕಂಟ್ರೋಲ್ ಇರಲಿಲ್ಲ. ಶಿಳ್ಳೆ ಕ್ಯಾತ ಜನರೇ ಪೆಸ್ಟ್ ಕಂಟ್ರೋಲ್ ಪ್ರವೀಣರು. ಅವರು ಬಂದವರೇ , ಮನೆಯ ಅಕ್ಕ ಪಕ್ಕ ಇರುತ್ತಿದ್ದ ಖಾಲಿ ಜಾಗದಲ್ಲಿ ಇಲಿಗಳ ಬಿಲ ಎಲ್ಲಿದೆ ಎನ್ನುವುದನ್ನು ಗುರುತಿಸುತ್ತಿದ್ದರು. ಮತ್ತು ಅದನ್ನು ಒಣಗಿದ ಹುಲ್ಲಿನಿಂದ ಮುಚ್ಚುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಆ ಬಿಲದಿಂದ ನೇರಕ್ಕೆ , ಸ್ವಲ್ಪ ಅಕ್ಕಪಕ್ಕ ಎಲ್ಲೆಡೆ ಹುಡುಕಾಡಿ ಇನ್ನೊಂದೆರೆಡು ಇಲಿ ಹೊರಬಹುದಾದ ಎಕ್ಸಿಟ್ಗಳನ್ನೂ ಕೂಡ ಮುಚ್ಚಿ ಬಿಡುತ್ತಿದ್ದರು.
ಮತ್ತೆ ಮೊದಲ ಬಿಲಕ್ಕೆ ಬಂದು ಒ...
Click here to read full article from source
To read the full article or to get the complete feed from this publication, please
Contact Us.