Bengaluru, ಮೇ 8 -- ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ ಹನುಮಂತ ಲಮಾಣಿ ಮತ್ತು ಧನರಾಜ್‌ ಆಚಾರ್‌, ಶೋ ಮುಗಿಯುವಷ್ಟರಲ್ಲಿ ಅತ್ಯಾಪ್ತ ಸ್ನೇಹಿತರಾದರು.

ಇಡೀ ಕರುನಾಡು ಈ ಜೋಡಿಗೆ ಬಹುಪರಾಕ್‌ ಹೇಳಿತ್ತು. ದೋಸ್ತಿಗೆ ಇನ್ನೊಂದು ಹೆಸರಾಗಿದ್ದರು. ಶೋ ಮುಗಿದ ಮೇಲೆಯೂ ಈ ಜೋಡಿಯ ನಡುವಿನ ಸ್ನೇಹ ಹಾಗೆಯೇ ಮುಂದುವರಿದಿದೆ.

ಇದೀಗ ಮೊದಲ ಸಲ ಹನುಮಂತ ಲಮಾಣಿಯ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾಕ್ಕೆ ಧನರಾಜ್‌ ಆಚಾರ್‌ ಮತ್ತು ಗೋಲ್ಡ್‌ ಸುರೇಶ್‌ ಆಗಮಿಸಿದ್ದಾರೆ.

ಚಿಲ್ಲೂರು ಬಡ್ನಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಗೋಲ್ಡ್‌ ಸುರೇಶ್‌ ಹೆಲಿಕಾಪ್ಟರ್‌ನಲ್ಲಿ ಬಂದರೆ, ಕರಾವಳಿಯಿಂದ ಸಹೋದರರ ಜತೆಗೆ ಕಾರ್‌ನಲ್ಲಿ ಬಂದಿದ್ದರು ಧನರಾಜ್.

ಗೋಲ್ಡ್‌ ಸುರೇಶ್‌, ಧನರಾಜ್‌, ಹನುಮಂತ ಒಂದೆಡೆ ಸೇರುತ್ತಿದ್ದಂತೆ, ಬಿಗ್‌ ಬಾಸ್‌ ಮನೆಯ ನೆನಪುಗಳನ್ನು ಮತ್ತೆ ಬಿಚ್ಚಿಟ್ಟಿದ್ದಾರೆ. ಹಾಸ್ಯ ಪ್ರಸಂಗಗಳನ್ನು ನೆನೆದು ನಗಾಡಿದ್ದಾರೆ. ಸಿಕ್...