ಭಾರತ, ಮೇ 22 -- ಬೆಂಗಳೂರು: ಕನ್ನಡದ ಇಬ್ಬರು ಪ್ರತಿಭಾವಂತರ ಅನುಭವ, ಬರವಣಿಗೆ, ಅನುವಾದ ಹೀಗೆ ಎಲ್ಲವೂ ಒಟ್ಟಂದದಲ್ಲಿ ಸೇರಿ ಅಂತರಾಷ್ಟ್ರೀಯ ಮಟ್ಟದ ಬೂಕರ್‌ ಪ್ರಶಸ್ತಿ ಪಡೆಯುವವರೆಗೂ ತಲುಪಿತು. ಕನ್ನಡದ ಜತೆಗೆ ಉರ್ದು ಭಾಷೆ ನಂಟಿನ ಬಾನು ಮುಷ್ತಾಕ್‌, ಕನ್ನಡದೊಂದಿಗೆ ಹವ್ಯಕ ಭಾಷೆಯೊಂದಿಗೆ ಬೆಳೆದ ದೀಪಾ ಭಸ್ತಿ ಅವರ ಅತ್ಯುತ್ತಮ ಹೊಂದಾಣಿಕೆ ಇದರ ಹಿಂದೆ ಕೆಲಸ ಮಾಡಿದೆ. ಭಾಷೆಯ ಸ್ವರೂಪ ಹೇಗೆ ನಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ನೆರವಾಗಬಲ್ಲದು ಎನ್ನುವುದನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಉಲ್ಲೇಖಿಸಿದ್ದಾರೆ. ಭಾಷಾ ವೈವಿಧ್ಯತೆ ಎನ್ನುವುದು ಬರವಣಿಗೆಗೆ, ಲೇಖಕರಲ್ಲಿನ ಗಟ್ಟಿತನಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ಟಿಪ್ಪಣಿ ಮಾಡಿದ್ದಾರೆ. ದೀಪಾ ಭಸ್ತಿಯಂಥ ಅನುವಾದಕಿ ಕನ್ನಡಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ. ಅವರು ಅನುವಾದದ ಸೂಕ್ಷ್ಮಗಳ ಬಗ್ಗೆ ಮತ್ತು ಕರ್ನಾಟಕದ ಬಹುಭಾಷಾ ಪರಿಸರದ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನವೊಂದರ ಎರಡು ಪ್ಯಾರಾಗಳು ಸರಳ ಅನುವಾದದಲ್ಲಿ ಎ...