ಭಾರತ, ಜನವರಿ 31 -- ಬೆಂಗಳೂರು: ಚೇತರಿಕೆಯ ಭರವಸೆಯಿಲ್ಲದ ರೋಗಿಯು ಘನತೆಯಿಂದ ಮರಣಹೊಂದುವ ಹಕ್ಕಿನ ಕುರಿತು ಸುಪ್ರೀಂಕೋರ್ಟ್ ಹೊರಡಿಸಿರುವ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ನಮ್ಮ ಕರ್ನಾಟಕ ಆರೋಗ್ಯ ಇಲಾಖೆ ಐತಿಹಾಸಿಕ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡಿದ್ದಾರೆ.
"ಚಿಕಿತ್ಸೆಗೆ ಸ್ಪಂದಿಸದೆ, ಉಳಿಯುವ ಯಾವುದೇ ಭರವಸೆಯಿಲ್ಲದೆ ಅಸ್ವಸ್ಥರಾಗಿರುವವರಿಗೆ ಮತ್ತು ಜೀವರಕ್ಷಕ ಚಿಕಿತ್ಸೆಗೆ ಯಾವುದೇ ಸ್ಪಂದನೆ ನೀಡದ ರೋಗಿಗಳು ಈ ಆದೇಶದಿಂದ ಪ್ರಯೋಜನ ಪಡೆಯಬಹುದು.
ಇದರೊಂದಿಗೆ ನಮ್ಮ ಇಲಾಖೆಯು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್ (AMD) ಅಥವಾ ಲಿವಿಂಗ್ ವಿಲ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ರೋಗಿಯು ಭವಿಷ್ಯದಲ್ಲಿ ತಮ್ಮ ವೈದ್ಯಕೀಯ ಚಿಕಿತ್ಸೆ ಕುರಿತು ತಮ್ಮ ಸ್ವಇಚ್ಛೆಗಳನ್ನು ದಾಖಲಿಸಬಹುದು" ಎಂದು ಅವರು ಹೇಳಿದ್ದಾರೆ.
ಈ ಮಹತ್ವದ ಹೆಜ್ಜೆಯು ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ನೆಮ್ಮದಿ ಮತ್ತು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.