Bandipur, ಏಪ್ರಿಲ್ 11 -- ಗುಂಡ್ಲುಪೇಟೆ: ಕರ್ನಾಟಕ ಹಾಗೂ ಕೇರಳ, ತಮಿಳುನಾಡಿನ ಭಾಗದ ಬಂಡೀಪುರ ಅರಣ್ಯದಲ್ಲಿ ದಶಕದಿಂದಲೂ ರಾತ್ರಿ ವೇಳೆ ವೇಳೆ ಸಂಚಾರ ನಿಷೇಧವಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಸಂಚಾರಕ್ಕೆ ಅವಕಾಶವಿದೆ. ಆದರೆ ರಾತ್ರಿ ಸಂಚಾರ ನಿಷೇಧ ತೆಗೆದು ಹಾಕಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ಕೇರಳದ ಭಾಗದಲ್ಲಿ ನಡೆದಿದೆ. ಆದರೆ ಕರ್ನಾಟಕ ಭಾಗದವರು ಮಾತ್ರವಲ್ಲದೇ ಕೇರಳ ಕಡೆಯ ಪರಿಸರಪ್ರೇಮಿಗಳು ಇದನ್ನು ಬಲವಾಗಿ ವಿರೋಧಿಸಿ ಹೋರಾಟವನ್ನೂ ನಡೆಸಿದ್ದಾರೆ. ಎಲ್ಲೆಡೆಯಿಂದಲೂ ಇದಕ್ಕೆ ವಿರೋಧವೇ ವ್ಯಕ್ತವಾಗುತ್ತಿದೆ. ವನ್ಯಜೀವಿಗಳು ರಾತ್ರಿಯಾದರೂ ಸಹಜವಾಗಿ ರಸ್ತೆ ದಾಟಲಿ. ಅವುಗಳ ಬದುಕಿಗೂ ಒಂದಷ್ಟು ಖಾಸಗಿತನ ಎನ್ನುವುದು ಬೇಕು ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ. ಇದಕ್ಕೆ ಮೈಸೂರಿನ ರಾಜವಂಶಸ್ಥರಾಗಿರುವ ಪ್ರಮೋದಾದೇವಿ ಒಡೆಯರ್‌ ಅವರೂ ದನಿಗೂಡಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಿಂದ ಕೇರಳಕ್ಲೆ ರಾತ್ರಿ ಸಂಚಾರ ನಿಷೇಧವಿದ್ದು, ಯಾವುದೇ ಕಾರಣಕ್ಕೂ...