Bangalore, ಏಪ್ರಿಲ್ 20 -- ನಾವೆಲ್ಲಾ ಈ ಪತ್ರಾವಳಿಗಳನ್ನ ಮರೆಯೋಕೆ ಸಾಧ್ಯನಾ? ಈಗ ಹೊಸ ತಲೆಮಾರಿಗೆ ಕೇವಲ ಹದಿನೈದಿಪ್ಪತ್ತು ವರ್ಷದ ಹಿಂದೆ ಊರೆಲ್ಲಾ ಮದುವೆ, ದೇವರ ಕಾರ್ಯ, ಇತರೆ ಇತರೆ ಶುಭ ಸಮಾರಂಭಗಳಿಗೆ ಊಟಕ್ಕೆ ಬಳಸ್ತಾ ಇದ್ದಿದ್ದು ಈ ಪತ್ರಾವಳಿ ಎಂಬ ಮುತ್ತಲೆಲೆಯ ಹಾಳೆ. ಮುತ್ತುಗದ ಮರದ ಎಲೆಗಳನ್ನು ಆಯ್ದು ತಂದು ತೆಂಗಿನ ಕಡ್ಡಿ ಇಂದ ಪೋಣಿಸಿ ಅಂದವಾಗಿ ಪೂರ್ಣ ಚಂದ್ರಾಕಾರವಾಗಿ ರೂಪಿಸಿ ಊಟದ ಎಲೆ ಸಿದ್ಧಪಡಿಸುತ್ತಿದ್ದರು. ಆಹಾ... ನನಗಿನ್ನೂ ನೆನಪಿದೆ. ಒಣಗಿದ ಮುತ್ತುಗದ ಎಲೆಯ ಘಮಲು ಮೂಗಿಗೆ ರಾಚಿದಾಂತಾಗುತ್ತದೆ. ಈ ಮುತ್ತುಗದೆಲೆಯ ಹಾಳೆಯ ಮೇಲೆ ಬಿಸಿಬಿಸಿ ಆಹಾರ ಪದಾರ್ಥ ಬಿದ್ದಾಗಲಂತೂ ಆ ಬಿಸಿ ಹಬೆಯ ಜೊತೆ ಮುತ್ತುಗದ ಎಲೆಯ ಗಂಧವೂ ಮಿಳಿತವಾಗಿ ಮುದನೀಡುತ್ತಿತ್ತು. ಯಾವೊಬ್ಬ ಅತಿಥಿಯೂ ಈ ಮುತ್ತುಗದ ಎಲೆಯ ಆತಿಥ್ಯವನ್ನು ನಿರಾಕರಿಸುತ್ತಿದ್ದಿಲ್ಲ. ಧನಿಕನಿಂದ ಬಡವನ ವರೆಗೆ ಅತಿ ಕಡಿಮೆ ಬೆಲೆಗೆ ದೊರಕುತ್ತಿದ್ದ ಪತ್ರಾವಳಿಗಳು ಈಗ ಬರಿಯ ನೆನಪು. ಊರಿನ ಅಂಗಡಿಗಳ ಮುಂದೆಲ್ಲಾ ಬಣವೆ ಒಟ್ಟುತ್ತಿದ್ದ ದೃಷ್ಯಗಳು ಈಗ ಎಲ್ಲಿಯೂ...
Click here to read full article from source
To read the full article or to get the complete feed from this publication, please
Contact Us.