ಭಾರತ, ಏಪ್ರಿಲ್ 28 -- ಪ್ರೀತಿ ಎಂಬುದು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ನಿಜವಾದ ಪ್ರೀತಿಯನ್ನು ಪಡೆಯಬೇಕು ಎಂದರೆ ಯುದ್ಧಭೂಮಿಯನ್ನು ಜಯಿಸಿ ಬಂದಷ್ಟೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರೀತಿಯನ್ನು ಪಡೆದುಕೊಳ್ಳಲು ಸಾಮಾನ್ಯ ಜನರಿಗೆ ಮಾತ್ರವಲ್ಲ ದೇವಾನುದೇವತೆಗಳಿಗೂ ಕಷ್ಟವಾಗಿತ್ತು. ಅನಾದಿಕಾಲದಿಂದಲೂ ಪ್ರೀತಿಯನ್ನು ಉಳಿಸಿಕೊಳ್ಳಲು ದೇವರುಗಳು ಕೂಡ ಹೋರಾಟ ನಡೆಸಿದ್ದರು. ಕೆಲವರ ಪ್ರೇಮಕಥೆ ಅರ್ಧಕ್ಕೆ ಅಂತ್ಯವಾದರೆ, ಇನ್ನೂ ಕೆಲವರದ್ದು ಸಾವಿರ ವರ್ಷಗಳ ಕಾಲ ಜೀವಂತವಾಗಿರುವಂಥದ್ದು.

ಪ್ರೀತಿ ಎಂದು ಬಂದಾಗ ನಮ್ಮ ಕಣ್ಣ ಮುಂದೆ ಮೊದಲು ಬರೋದು ರಾಧಾ-ಕೃಷ್ಣ. ಅವರದ್ದು ಅಮರ ಪ್ರೇಮ. ಪ್ರೀತಿ ಪಡೆಯಲು ಸಾಧ್ಯವಾಗದೇ ಇದ್ದರೂ ಒಬ್ಬರನ್ನೊಬ್ಬರು ಜೀವಕ್ಕೆ ಜೀವ ಎಂಬಂತೆ ಪ್ರೀತಿಸುತ್ತಿದ್ದರು. ಆದರೆ ಇವರಂತೆ ಪ್ರೀತಿ ಮಾಡಿ, ಪ್ರೀತಿಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆಯಾದ ಜೋಡಿಯು ನಮ್ಮ ಪುರಾಣದಲ್ಲಿತ್ತು. ಅದುವೇ ಶಿವ-ಪಾರ್ವತಿ ಜೋಡಿ. ಇವರು ಕೂಡ ಪ್ರೀತಿಗೆ ಹೊಸ ವಾಖ್ಯಾನ ಬರೆದಿದ್ದರು. ಅಲ್ಲದೇ ಇವರಿಗೆ ಪ್ರೀತಿ ಸುಲಭ...