ಭಾರತ, ಮೇ 2 -- ನರೇಂದ್ರ ಮೋದಿ ಅವರು ಇದು ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದುಕೊಂಡಿದ್ದಾರೆ. ಎರಡು ಅವಧಿಗೆ ಪೂರ್ಣಬಹುಮತದೊಂದಿಗೆ ಈಗ ಮೈತ್ರಿ ಸರ್ಕಾರ. ರಾಜಕೀಯ ಭರವಸೆಗಳು ಮತ್ತು ಅವುಗಳನ್ನು ಈಡೇರಿಸುವ ವಿಚಾರದಲ್ಲಿ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿಗಳು ಈಗ ಚರ್ಚೆಗೆ ಒಳಗಾಗಿದೆ. ಇದೇ ವಿಚಾರದ ಕಡೆಗೆ ಗಮನಸೆಳೆದ ಪತ್ರಕರ್ತ ರಾಜೀವ ಹೆಗಡೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಹೀಗೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ನಾಯಕರೊಬ್ಬರ ಬಳಿ ಮಾತನಾಡುವಾಗ ಹೀಗೊಂದು ಮಾತನ್ನು ಹೇಳಿದ್ದರು. ʼ2029ರ ಲೋಕಸಭೆ ಚುನಾವಣೆಯೊಳಗೆ ಭಾರತದ ಚುನಾವಣೆಯಲ್ಲಿ ಎರಡು ಆಶಾದಾಯಕ ಬದಲಾವಣೆ ಕಾಣಬಹುದು. ಮೊದಲನೆಯದಾಗಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಗೆ ತೆರೆ ಬೀಳಲಿದೆ. ಎರಡನೇಯದಾಗಿ ಜಾತಿಯಾಧಾರಿತ ಚುನಾವಣೆ ನಡೆಯದುʼ ಎಂದಿದ್ದರು. ಆ ಕ್ಷಣದಲ್ಲಿ ಇವೆರಡೂ ವಿಚಾರಕ್ಕೆ ಸಂಬಂಧಿಸಿ ಮನಸ್ಸಿನೊಳಗೆ ನಕ್ಕಿದ್ದೆ. ಆದರೆ ಮೋದಿ ಮೇಲಿನ ಸಣ್ಣ ನಂಬಿಕೆಯ ಕಾರಣದಿಂದ ಆಶಾ ಭಾವನೆ ಇರಿಸಿಕೊಂಡಿದ್ದೆ. ಇದಕ್ಕೂ ಮೊದಲು 2016...