Bengaluru, ಮೇ 20 -- ಬೆಂಗಳೂರು ನಗರದಲ್ಲಿನ ಸಮಸ್ಯೆಗಳ ಬಗ್ಗೆ ರಾಜೀವ್ ಹೆಗಡೆ ಮತ್ತೊಮ್ಮೆ ತಮ್ಮ ಬರಹದ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರ ಫೇಸ್‌ಬುಕ್ ಬರಹದ ಯಥಾವತ್ ರೂಪ ಇಲ್ಲಿದೆ. ಬೆಂಗಳೂರಿನ ಕಸದ ವಿಲೇವಾರಿ ಮತ್ತು ಮಳೆ ನೀರಿನ ಅವಾಂತರ ಸಮಸ್ಯೆಗಳ ಬಗ್ಗೆ ಅವರು ಜನರ ಗಮನ ಸೆಳೆದಿದ್ದಾರೆ. ಜತೆಗೆ ಸರ್ಕಾರದ ನಿರ್ಲಕ್ಷ್ಯದ ಬಗೆಗೂ ವಿವರಿಸಿದ್ದಾರೆ.

ಬೆಂಗಳೂರು ನಗರವು ಮತ್ತೊಮ್ಮೆ ನೀರಿನೊಳಗೆ ಮುಳುಗಿದೆ. ಸಾವಿರಾರು ಕುಟುಂಬಗಳ ವಾರ್ಷಿಕ ಉಳಿತಾಯ ಕರಗಿ ಹೋಗಿದೆ. ಮಳೆಯ ನಡುವೆ ಅದೆಷ್ಟೋ ಜನರ ಕಣ್ಣೀರು ಕಾಣುತ್ತಲೇ ಇಲ್ಲ. ಆದರೆ ನಮ್ಮ ಗ್ರೇಟರ್‌ ಬೆಂಗಳೂರು ಸರ್ಕಾರ ಹಾಗೂ ಬ್ರಾಂಡ್‌ ಬೆಂಗಳೂರಿನ ಸಚಿವರು ಸಮಾವೇಶದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ನಾವಿಂದು ಆಕ್ರೋಶದಲ್ಲಿ ಒಂದೆರಡು ಪೋಸ್ಟ್‌ ಹಾಕಿ ಮತ್ತೆ ಸುಮ್ಮನಾಗುತ್ತೇವೆ. ಭ್ರಷ್ಟ ವ್ಯವಸ್ಥೆಯು ʼದಶಕ, ಶತಮಾನದಲ್ಲೇ ಭಾರಿ ಮಳೆ ಬಂದಾಗ ಇಂತಹ ಸಣ್ಣ ಪುಟ್ಟ ಸಮಸ್ಯೆ ಸಾಮಾನ್ಯʼವೆಂದು ಮತ್ತೆ ನಾಳೆಯಿಂದ ಮೇಯಲು ಮುಂದುವರಿಸುತ್ತಾರೆ. ನಾವು ಕೂಡ ಮೈಮೇಲೆ ಇನ್ನೊಂದು ಕಂಬಳ...