ಭಾರತ, ಫೆಬ್ರವರಿ 5 -- ಪ್ರತಿದಿನ ನಾವು ಆಹಾರಗಳನ್ನು ಸೇವಿಸುವ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತೇವೆ. ಆದರೆ ಆಹಾರವು ಜೀರ್ಣವಾದ ನಂತರ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಹೊರತು ಪಡಿಸಿ ಉಳಿದವು ದೊಡ್ಡ ಕರುಳಿನ ಮೂಲಕ ಮಲದ ರೂಪದಲ್ಲಿ ಹೊರ ಹೋಗುತ್ತದೆ. ಪ್ರತಿದಿನ ಆಹಾರ ಸೇವಿಸುವಷ್ಟೇ ಅಲ್ಲ, ಸರಿಯಾಗಿ ಮಲವಿಸರ್ಜನೆ ಮಾಡುವುದು ಅವಶ್ಯ.

ಆದರೆ ಇತ್ತೀಚಿನ ದಿನಗಳಲ್ಲಿ ಮಲ ವಿಸರ್ಜನೆ ವಿಚಾರದಲ್ಲಿ ಹಲವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮಲ ವಿಸರ್ಜನೆ ಸರಿಯಾಗಿ ಆಗಿಲ್ಲ ಅಂದರೆ, ನಿರಂತರವಾಗಿಲ್ಲ ಎಂದರೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ನಾವು ಅಲ್ಲಗೆಳೆಯವಂತಿಲ್ಲ. 'ಪ್ರತಿದಿನ ಸರಿಯಾಗಿ ಮಲ ವಿಸರ್ಜನೆಯಾಗಿಲ್ಲ ಎಂದರೆ ಕರುಳು ಸ್ವಚ್ಛಗೊಳ್ಳುವುದಿಲ್ಲ. ಇದರಿಂದ ದೊಡ್ಡ ಕರುಳಿನಲ್ಲಿ ತ್ಯಾಜ್ಯ ಸಂಗ್ರಹವಾಗಲು ಕಾರಣವಾಗಬಹುದು. ಇದು ಹೊಟ್ಟೆಯುಬ್ಬರ, ಹೊಟ್ಟೆ ಭಾರವಾಗುವುದು, ಹೊಟ್ಟೆನೋವು ಮುಂತಾದ ಸಮಸ್ಯೆಗಳನ್ನು ಉಂಟು ಮಾಡಬಹುದು' ಎನ್ನುತ್ತಾರೆ ದೆಹಲಿಯ ಸಿಕೆ ಬಿರ್ಲಾ ಆಸ್...