ಭಾರತ, ಮೇ 20 -- ಭಾರತ ಪಾಕ್ ಬಿಕ್ಕಟ್ಟು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ, ಭಾರತವು ಮೇ 7 ರ ನಸುಕಿನ ವೇಳೆ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಉಭಯ ದೇಶಗಳ ನಡುವಿನ 4 ದಿನಗಳ ತೀವ್ರ ಸಮರದ ಬಳಿಕ, ಪಾಕಿಸ್ತಾನದ ಕದನ ವಿರಾಮ ಮನವಿ ಅಂಗೀಕರಿಸಿ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಸ್ಥಗಿತಗೊಳಿಸಿದೆ. ಈ ಕಾರ್ಯಾಚರಣೆಯು ಭಾರತೀಯ ವಾಯು ಪಡೆಯ ಶಕ್ತಿಯನ್ನು ಜಗಜ್ಜಾಹೀರುಗೊಳಿಸಿತು. ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳು ನೆಲಕಚ್ಚಿದವು. ಈಗ ಆಪರೇಷನ್ ಸಿಂದೂರ್ಗೆ ಸಂಬಂಧಿಸಿ, ವಾಯುಪಡೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸುಮೇರ್ ಇವಾನ್ ಡಿ ಕುನ್ಹಾ ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳತ್ತ ಗಮನಸೆಳೆದಿದ್ದಾರೆ.
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯನ್ನು ರಾವಲ್ಪಿಂಡಿಯಿಂದ ಖ...
Click here to read full article from source
To read the full article or to get the complete feed from this publication, please
Contact Us.