Mangalore, ಮೇ 9 -- ಮಂಗಳೂರು: ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಕರಾವಳಿ ಮೂಲದ ಬಾಲಿವುಡ್‌ ನಟಿ ಪೂಜಾ ಹೆಗ್ಡೆ ಭೇಟಿ ನೀಡಿದ್ದಾರೆ. ಕಾರ್ಕಳದ ನ್ಯೂಸ್‌ ವೆಬ್‌ಸೈಟ್‌ "ನ್ಯೂಸ್‌ಕಾರ್ಕಳ.ಕಾಂ"ಗೆ ಸಂದರ್ಶನ ನೀಡಿದ್ದು, ಹಲವು ವಿಷಯಗಳ ಕುರಿತು ತುಳುವಿನಲ್ಲೇ ಮಾತನಾಡಿದ್ದಾರೆ. ವಿಶೇಷವಾಗಿ ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಭೂತಾರಾಧನೆ, ದೈವರಾಧನೆ ಕುರಿತೂ ಮಾತನಾಡಿದ್ದಾರೆ. ಮಿಸ್‌ ಯೂನಿವರ್ಸ್‌ ಸ್ಪರ್ಧೆಯ ದಿನದಿಂದ, ಪ್ರಮುಖ ಚಿತ್ರಗಳಲ್ಲಿ ನಟಿಸಿದ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ತುಳು ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಕುರಿತೂ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ತುಳು ಹುಡುಗನ ಮದುವೆಯಾಗುವಿರಾ? ಎಂಬ ಪ್ರಶ್ನೆಯೂ ನಟಿಗೆ ಎದುರಾಗಿದೆ.

ಹಳೆಯ ನೆನಪುಗಳು ತುಂಬಾ ಇವೆ. ಪ್ರತಿವರ್ಷ ಊರಿಗೆ ಬಂದಾಗ ಇಲ್ಲಿ ಕಣಜಾರ್‌ನಲ್ಲಿ ನನ್ನ ತಂದೆಯ ತಂದೆ ಅಂದ್ರೆ ಅಜ್ಜನ ಮನೆಗೆ ಭೇಟಿ ನೀಡುತ್ತಿದ್ದೆ. ಇಲ್ಲಿಗೆ ಬಂದಾಗ ಇಲ್ಲೇ ಉಳಿದುಕೊಳ್ಳುತ್ತ ಇದ್ದೇವು. ತುಂಬಾ ಗಮ್ಮ...