Dharwad, ಮೇ 18 -- ಧಾರವಾಡ: ಮಗ್ರಮಾ ಎಂದೇ ಖ್ಯಾತವಾದ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಇನ್ನಿಲ್ಲ.ಮನೋಹರ ಗ್ರಂಥಮಾಲಾ ಧಾರವಾಡದ ಸಂಪಾದಕರು, ವ್ಯವಸ್ಥಾಪಕರು, ನಿವೃತ್ತ ಆಂಗ್ಲ ಪ್ರಾಧ್ಯಾಪಕ ಮತ್ತು ಬರಹಗಾರ ಡಾ.ರಮಾಕಾಂತ ಜೋಶಿಯವರು ಶನಿವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹುಬ್ಬಳ್ಳಿಯ ಶುಚಿರಾಯಿ ಆಸ್ಪತ್ರೆಯಲ್ಲಿ ನಮ್ಮನ್ನಗಲಿದ ರಮಾಕಾಂತರ ಅಂತ್ಯಕ್ರಿಯೆ 2025ರ ಮೇ 18 ರವಿವಾರ ಬೆಳಿಗ್ಗೆ 10.00 ಗಂಟೆಗೆ ಧಾರವಾಡ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದ್ದು ಬೆಳಿಗ್ಗೆ 09.00 ರಿಂದ 10.00 ರ ವರೆಗೆ ಧಾರವಾಡದ ಮಂಗಳವಾರ ಪೇಟೆ, ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮನೋಹರ ಗ್ರಂಥಮಾಲಾ ಸ್ಥಾಪಕರಾದ ಜಿ. ಬಿ. ಜೋಶಿಯವರ ಮಗನಾದ ಡಾ.ರಮಾಕಾಂತ ಜೋಶಿಯವರು ಗುಜರಾತಿನ ಆನಂದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು ಮತ್ತು ವಿಭಾಗದ...